ಬಾನಬಯಲಾಟ: ಗ್ರಹಣ

Author : ಜಿ.ಟಿ. ನಾರಾಯಣರಾವ್

Pages 76

₹ 10.00




Year of Publication: 1999
Published by: ಅತ್ರಿ ಬುಕ್ ಸೆಂಟರ್
Address: ಶರಾವತಿ ಕಟ್ಟಡ, ಬಲ್ಮಠ ರೋಡ್, ಮಂಗಳೂರು. 575001

Synopsys

ಗ್ರಹಣ ಎಂಬುದು ಅಪ್ಪಟ ಖಗೋಳ ವಿದ್ಯಮಾನ. ಅದರಿಂದ ಯಾವುದೇ ತೊಂದರೆ ಇಲ್ಲ ಎಂಬ ವೈಚಾರಿಕ ಸ್ಪಷ್ಟತೆ ಹೊಂದಿರುವ ವಿಜ್ಞಾನದ ಪುಸ್ತಕ ”ಬಾನ ಬಯಲಾಟ: ಗ್ರಹಣ’

ಶೀರ್ಷಿಕೆಯೇ ಹೇಳುವಂತೆ ಇದು ಆಕಾಶವೇ ಹೂಡಿದ ಆಟ. ಅಲ್ಲಿಗೆ ಗ್ರಹಣದ ಬಗ್ಗೆ ಭಯ ಬೇಡ ಎಂಬುದನ್ನು ಲೇಖಕರು ಶೀರ್ಷಿಕೆಯ ಮೂರೇ ಪದಗಳಲ್ಲಿ ಸೂಚ್ಯವಾಗಿ ವಿವರಿಸಿದ್ದಾರೆ. 

ಚಂದ್ರಗ್ರಹಣ, ಸೂರ್ಯಗ್ರಹಣದ ವಿವರಗಳು, ಆ ಸಂದರ್ಭದಲ್ಲಿ ಭೂಮಿ ಸೇರಿದಂತೆ ಆಕಾಶಕಾಯಗಳಲ್ಲಿ ಆಗುವ ಬದಲಾವಣೆಗಳನ್ನು ಕೃತಿ ಹೇಳುತ್ತದೆ. ’ನಮ್ಮ ವರ್ತಮಾನ ಭವಿಷ್ಯಗಳನ್ನು ಗ್ರಹಣ ನಿರ್ಧರಿಸುವುದಿಲ್ಲ. ನಾವೇ ನಮ್ಮ ವರ್ತಮಾನದ ನಿರ್ಮಾಪಕರು ಮತ್ತು ಭವಿಷ್ಯ ನಿರ್ಧಾರಕರು. ಸೂರ್ಯಗ್ರಹಣ ಅಥವಾ ಚಂದ್ರಗ್ರಹಣ ವ್ಯಕ್ತಿಯ ಬುದ್ದಿಗ್ರಹಣಕ್ಕೆ ಕಾರಣವಾಗಬಾರದು, ಬುದ್ಧಿ ಪ್ರಜ್ವಲನೆಗೆ ಪ್ರೇರಕವಾಗಬೇಕು’ ಎಂಬ ಆಶಯ ಕೃತಿಯದ್ದು. 

About the Author

ಜಿ.ಟಿ. ನಾರಾಯಣರಾವ್
(30 January 1926)

ಜಿ.ಟಿ.ನಾರಾಯಣ ರಾವ್ ಅವರು ಪುತ್ತೂರಿನ ಸಮೀಪದ ಮರಿಕೆ ಗ್ರಾಮದಲ್ಲಿ 30-01-1926ರಂದು ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಎನ್.ಸಿ.ಸಿ. ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತ ಹಾಗೂ ಕನ್ನಡ ಅಭಿಜಾತ ವಾಙ್ಙಯ ಕುರಿತು ಅಪಾರ ಆಸಕ್ತಿ ಹೊಂದಿದ್ದಾರೆ, ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪನ ಮತ್ತೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸಿ.ವಿ. ರಾಮನ್‌ರನ್ನು ಬೆಂಗಳೂರಿನಲ್ಲಿಯೂ, ಎಸ್. ಚಂದ್ರಶೇಖರ್‌ರನ್ನು ಚಿಕಾಗೋದಲ್ಲಿಯೂ ಭೇಟಿಮಾಡಿ ವೈಜ್ಞಾನಿಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಕನ್ನಡಕ್ಕೆ ವಿಪುಲ ಸ್ವತಂತ್ರ ವೈಜ್ಞಾನಿಕ ಕೃತಿಗಳನ್ನೂ, ಕೆಲವು ...

READ MORE

Related Books