ಕೆರೆಯಲಿ ಚಿನ್ನ ಕೆರೆಯೇ ಚಿನ್ನ

Author : ನಾಗೇಶ ಹೆಗಡೆ

Pages 60

₹ 54.00

Buy Now


Year of Publication: 2011
Published by: ಭೂಮಿ ಬುಕ್ಸ್
Address: # 150, ಮೊದಲ ಮುಖ್ಯ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು-560020
Phone: 9449177628

Synopsys

ಕೆರೆಗಳು ಊರಿನ ಸಂಪತ್ತು. ಜನತೆಯ ಆರೋಗ್ಯಕ್ಕೂ ಪೂರಕ. ಕೆರೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಅಲ್ಲಿಯ ಮರಳು ಬಗೆಯಲು ಲೂಟಿಕೋರರು ಪೈಪೋಟಿ ನಡೆಸುತ್ತಿರುವುದು ಇಂದಿನ ದುರಂತ. ಕೆರೆಗಳು ಊರಿನ ಚಿನ್ನವಿದ್ದ ಹಾಗೆ. ಅದರಡಿಯೂ ಚಿನ್ನದಂತಹ ಖನಿಜಗಳೇ ಇವೆ. ಈ ಕೆರೆಗಳ ಸಂರಕ್ಷಣೆ ಅಸಾಧ್ಯವಾದರೆ ಜನರ ಬದುಕು ಅಸಾಧ್ಯವಾಗುತ್ತದೆ. ದೇಶದ ವಿವಿಧೆಡೆ ಕೆರೆಗಳ ತಳದಲ್ಲಿ ಚಿನ್ನವಿದ್ದು ಅದನ್ನು ಕಾಯುವ ಸಲುವಾಗಿ ದೊಡ್ಡ ಹಾವು ಸುತ್ತುತ್ತಿರುತ್ತದೆ ಎಂಬ ನಂಬಿಕೆ ನಮ್ಮಲ್ಲಿಕೆ ಬಹುತೇಕ ಕೆರೆಗಳ ಬಗ್ಗೆ ಇರುವುದನ್ನು ಕಾಣುತ್ತೇವೆ. ಇದರ ಹಿಂದಿನ ಮರ್ಮ ಏನೆಂದರೆ, ಕೆರೆಗಳೇ ಚಿನ್ನವಿದ್ದ ಹಾಗೆ. ಅವನ್ನು ಕಾಯ್ದುಕೊಂಡು ಹೋಗಬೇಕು ಎಂಬುದನ್ನು ಲೇಖಕರು ಸವಿವರವಾಗಿ ಹಾಗೂ ವೈಜ್ಞಾನಿಕವಾಗಿ ವಿವರಿಸಿದ್ದಾರೆ. ಈ ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿದೆ ಮತ್ತು 21ನೇ ಶತಮಾನದ ಶ್ರೇಷ್ಠ ಮಕ್ಕಳ ಕತೆಯ ಸಾಲಿಗೆ ಸೇರ್ಪಡೆಯಾಗಿದೆ.

About the Author

ನಾಗೇಶ ಹೆಗಡೆ
(14 February 1948)

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...

READ MORE

Related Books