About the Author

ಅಡ್ಲೂರು ರಾಜು ಅಷ್ಟೆ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಡ್ಲೂರು ಗ್ರಾಮದವರು. ಎಂಜಿನಿಯರಿಂಗ್ ಪದವೀಧರರು. ಜೊತೆಗೆ ಸಾಹಿತ್ಯದ ಆಸಕ್ತಿ. ಅವರ ಮೊದಲ ಕವನ ಸಂಕಲನ ‘ಮಾಗಿಯ ಹನಿಗಳು’ ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರಿಗೆ ಕೊಡುವ ಪ್ರೋತ್ಸಾಹ ಧನ ಪಡೆದು 2015ರಲ್ಲಿ ಬಿಡುಗಡೆಯಾಯಿತು. ಅವರ ಮೊದಲ ಕಾದಂಬರಿ ‘ಚರ್ಮಾಯಿ’ 2017ರಲ್ಲಿ ಬಿಡುಗಡೆಗೊಂಡಿದ್ದು, ಮತ್ತೊಂದು ಕಾದಂಬರಿ ‘ಇಂದಿರಾ ಬೇಡಿ- 2023’ ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ಕನ್ನಡ ಸುದ್ದಿ ಮಾಧ್ಯಮದಲ್ಲಿ ತಾಂತ್ರಿಕ ಎಂಜಿನಿಯರ್ ಹುದ್ದೆ ನಿರ್ವಹಿಸುತ್ತಿದ್ದಾರೆ.

ಅಡ್ಲೂರು ರಾಜು ಅಷ್ಟೆ

(13 Jun 1984)