About the Author

ಲೇಖಕ ಬಸವಣ್ಣ ಎಸ್ ಮೂಕಹಳ್ಳಿ ಅವರು ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲೂಕಿನ ಕೆ.‌ಮೂಕಹಳ್ಳಿ ಗ್ರಾಮದವರು. ತಂದೆ ಸುಬ್ಬಯ್ಯ, ತಾಯಿ ಶಿವಮ್ಮ. ತಮ್ಮ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ ಶಿಕ್ಷಣವನ್ನು ಕೆ.‌ಮೂಕಹಳ್ಳಿ, ಮಂಗಲ, ಕುದೇರು, ಚಾಮರಾಜನಗರದಲ್ಲಿ ಪೂರೈಸಿಕೊಂಡರು.  ಮೈಸೂರಿನ ಬಿಜಿಎಸ್ ಕಾಲೇಜಿನಲ್ಲಿ ಬಿಇಡಿ ಪದವೀಧರರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಫಿಲ್ ಪದವೀಧರರು. 2014-16 ರ ಅವದಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಹಾಗೂ ದೆಹಲಿಯ  ಐ.ಸಿ.ಎಸ್.ಎಸ್.ಆರ್.‌ ಸಂಯೋಜಿತ  'ತಳ ಸಮುದಾಯಗಳ ಪದಕೋಶ' ಯೋಜನೆಯಡಿ ಸಹ ಸಂಶೋಧಕರಾಗಿದ್ದರು. ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಚಾಮರಾಜನಗರದ  ಡಾ. ಬಿ ಆರ್ ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ, ಸುವರ್ಣ ಗಂಗೋತ್ರಿಯಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. 

ಕೃತಿಗಳು: ದೀವಟಿಗೆ (ಕವನ ಸಂಕಲನ), ಕೆಂಡದ ಬೆರಗು (ಸಂಶೋಧನೆ)

ಬಸವಣ್ಣ ಎಂ. ಎಸ್

(01 Jun 1987)