About the Author

ಕವಿ ಬಸವರಾಜ ಕಾಸೆ ಅವರು ವಿಜಯಪುರ ಜಿಲ್ಲೆಯ (ಜನನ: 01-06-1987) ಬಬಲೇಶ್ವರ ತಾಲೂಕಿನವರು. ಎಂ.ಎ. ಸ್ನಾತಕೋತ್ತರ ಪದವೀಧರರು. ಸದ್ಯ, ಬೆಂಗಳೂರಿನ ಎಂಬಾಸಿಸ್ ಬಿಪಿಒ ಲಿಮಿಟೆಡ್ ನಲ್ಲಿ ಟೀಮ್ ಲೀಡರ್ ಹುದ್ದೆ ನಿರ್ವಹಿಸುತ್ತಿದ್ದಾರೆ. 

‘ವಿಜಲ್ ವಿಜಲು ಗಜಲ್ ಘಮಲು’ ಎಂಬುದು ಇವರ ಮೊದಲ ಗಜಲ್ ಸಂಕಲನ. ಇಲ್ಲಿಯ ಎಲ್ಲ ಗಜಲ್ ಗಳು ನಾಡಿನ ವಿವಿಧ ದಿನಪತ್ರಿಕೆ, ಪಾಕ್ಷಿಕ, ಮಾಸಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 

‘ಸಂಯುಕ್ತ ಕರ್ನಾಟಕ’  ಏರ್ಪಡಿಸುವ ಸಂಕ್ರಾಂತಿ ಸ್ಪರ್ಧೆ, ಹೊಸ ದಿಗಂತ ದಿನಪತ್ರಿಕೆಯ ಯುಗಾದಿ ಸ್ಪರ್ಧೆ, ವಿಜಯ ಕರ್ನಾಟಕದ ದೀಪಾವಳಿ ಸ್ಪರ್ಧೆ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮಟ್ಟದ ಸ್ಪರ್ಧೆ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಈ ಗಜಲ್ ಗಳು ಗಮನ ಸೆಳೆದಿದ್ದು, ವಿವಿಧ ಬಹುಮಾನಗಳನ್ನು ಪಡೆದಿವೆ.

ವಿಶ್ವವಾಣಿ, ವಿನಯವಾಣಿ, ಪ್ರಜಾ ಸಮಯ, ಸಂಗಾತಿ ಪತ್ರಿಕೆಗಳಲ್ಲಿಅಂಕಣ ಬರಹಗಾರರಾಗಿಯೂ ಕೆಲಸ ಮಾಡಿದ್ದಾರೆ. ಕಾವ್ಯದ ಗುಣಮಟ್ಟ ಮತ್ತು ಭಾವನೆಗಳ ಅಭಿವ್ಯಕ್ತಿಗೆ ಇವರು ತಮ್ಮ ಗಜಲ್ ಗಳಲ್ಲಿ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಚುಟುಕು, ಹನಿಗವನ, ಶಾಯರಿ, ರುಬಾಯಿಗಳು, ಕಿರು ಕಥೆ, ನ್ಯಾನೋ ಕಥೆ, ಪ್ರಬಂಧ, ಭಾವಗೀತೆ, ಕವನ ರಚನೆಯಲ್ಲಿ ಆಸಕ್ತಿ ಹೊಂದಿದ್ದಾರೆ. . 

ಬಸವರಾಜ ಕಾಸೆ

(01 Jun 1987)