About the Author

ಭಾರ್ಗವಿ ನಾರಾಯಣ ಅವರು ಇಂಗ್ಲಿಷ್ ಎಂ.ಎ. ಪದವಿ ಪಡೆದವರು.  ಇ.ಎಸ್.ಐ, ಕಾರ್ಪೋರೇಷನ್‌ನಲ್ಲಿ ವ್ಯವಸ್ಥಾಪಕರಾಗಿ 31  ವರ್ಷಗಳ  ಕಾಲ  ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಬಾಲಕಲಾವಿದೆಯಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿದ ಇವರು ಕಿರುತೆರೆ-ಹಿರಿತೆರೆಗಳಲ್ಲಿಯೂ ತಮ್ಮ ಮನೋಜ್ಞ ಅಭಿನಯವನ್ನು ಪ್ರದರ್ಶಿಸಿದ್ದಾರೆ. ಹಲವಾರು ನಾಟಕಗಳನ್ನು ತಾವೇ ರಚಿಸಿ ಆಕಾಶವಾಣಿಗೆ ನಿರ್ದೇಶನವನ್ನು ಸಹ ಮಾಡಿದ್ದಾರೆ. ಇವರು ಸಹಕಲಾವಿದರಾಗಿ ಅಭಿನಯಿಸಿರುವ ಪ್ರೊ. ಹುಚ್ಚುರಾಯ ಸಿನಿಮಾದ ಅಭಿನಯಕ್ಕೆ 1974 ರಲ್ಲಿ ಅತ್ಯುತ್ತಮ ಪೋಷಕ ನಟಿ ರಾಜ್ಯಪ್ರಶಸ್ತಿ ಸಂದಿದೆ. ಹವ್ಯಾಸಿ ಬರಹಗಾರರಾಗಿರುವ ಇವರು  1998 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯು ಲಭಿಸಿದೆ. 'ಕವಲೊಡೆದ ದಾರಿ' ಭಾಗ-2  ಧಾರಾವಾಹಿಗೆ ಅವರು ರಚಿಸಿದ ಕತೆ ಹಾಗೂ ಸಂಭಾಷಣೆಗೆ ಸಂದೇಶ ಪ್ರಶಸ್ತಿ ಸಂದಿದೆ. 'ನಾನು ಭಾರ್ಗವಿ' ಎಂಬ ಇವರ ಆತ್ಮಕತೆಗೆ 2013 ರ ಎಂ.ಕೆ. ಇಂದಿರಾ ಪುರಸ್ಕಾರ ಇವರಿಗೆ ಲಭಿಸಿದೆ. 

14-02-2022 ರಂದು ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. 

ಭಾರ್ಗವಿ ನಾರಾಯಣ

(04 Feb 1938-14 Feb 2022)