About the Author

ಕವಿ, ಲೇಖಕ ಚಂದ್ರಗೌಡ ಕುಲಕರ್ಣಿ ಅವರು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಡದಳ್ಳಿ ಗ್ರಾಮದವರು. ಹುಟ್ಟೂರು, ಅಮರಗೋಳ, ಧಾರವಾಡ ಹಾಗೂ ನರಗುಂದದಲ್ಲಿ ಶಿಕ್ಷಣ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವೀಧರರು. ವಿಜಯಪುರ ಜಿಲ್ಲೆಯ ತಾಳಿಕೋಟೆಯ ಖಾಸ್ಗತೇಶ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರು. 

 ಕಥೆ,ಕವನ,  ಪ್ರಾಸಬಂಧ, ಪದಬಂಧ, ಪದಶೋಧ, ಪದಚಲ್ಲಾಟ, ಅಕ್ಷರ ಸುಡೋಕು, ಹುಡುಕಾಟ - ತೊಡಕಾಟ ಅಂಕ ಮೋಡಿಯಲ್ಲಿ ಬೆರೆತ ಮನಸಿಗೆ ಜನಪದ ಲೆಕ್ಕ - ಕವಡ ಕಂಟಗ ಲೆಕ್ಕ, ಒಗಟು, ಬೆಡಗು, ಭಾಷಾ ಚಮತ್ಕಾರ, ಮೋಜಿನ ಮಾಯಾ ಚೌಕ ಹೀಗೆ ವಿವಿಧ ವಲಯದಲ್ಲಿ ಆಸಕ್ತಿ. ದೂರದರ್ಶನದ ಬೆಳಗು ಹಾಗೂ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಕವನಗಳ ಮೂಲಕ ಿವರ ಚಿಂತನೆಗಳು ಪ್ರಸಾರವಾಗಿವೆ. 

ಕೃತಿಗಳು: ಬೆಣ್ಣೆಹಳ್ಳು (ಮಕ್ಕಳ ಕವಿತೆಗಳು, ಒಗಟು ಬಿಡಿಸೊ ಜಾಣ (ಮಕ್ಕಳ ಒಗಟು ಕವಿತೆಗಳು), ಒಗಟು ಬಿಡಿಸೊ ಜಾಣ (ಜನಪದ ಬಯಲಾಟ), ಟಂ-ಟಂ- ಚುಟುಕು (ಒಗಟುಗಳು), ತಾಳಿಕೋಟೆ ಖಾಸ್ಗತ ಶಿವಯೋಗಿ (ಜೀವನ ಚರಿತ್ರೆ), ಟೂ..ಟೂ..ಬಿಟ್ಟೀನಿ (ಮಕ್ಕಳ ಕವಿತೆಗಳು), ಸೊಂಯ್ ಸೊಂಯ್ ಸೊಳ್ಳೆ (ಮಕ್ಕಳ ಕವಿತೆಗಳು), ಹಾರೋಣ ಬಾ, ಹಾಡೋಣ ಬಾ (ಮಕ್ಕಳ ಕವಿತೆಗಳು), ಏಸೊತ್ತ ನೆನೆಯಲಿ ಖಾಸ್ಗತ (ತ್ರಿಪದಿಗಳು)ಸಂತ ಶಿಶುನಾಳ ಶರೀಫ (ಜೀವನ ಚರಿತ್ರೆ), ಬಿಡಿಗಾಳು ಹಿಡಿಗಾಳು (ಆಧುನಿಕ ತ್ರಿಪದಿಗಳು), ತಾಳಿಕೋಟಿ ದ್ಯಾಮವ್ವ (ತ್ರಿಪದಿ ಖಂಡ ಕಾವ್ಯ), ಯಾರಿಗೂ ಇದನ ಹೇಳಬಾರದು (ಮಕ್ಕಳ ಕವಿತೆಗಳು), ಕಾವ್ಯ ಸಂಪದ (ಕರ್ನಾಟಕ ವಿ.ವಿ. ಪಠ್ಯ ಸಂಪಾದನೆ) ಕಾವ್ಯ ಸಂಗಮ (ಕರ್ನಾಟಕ ವಿ.ವಿ. ಪಠ್ಯ ಸಂಪಾದನೆ), ಉದ್ದನೆ ಬಾಲ ಇದ್ರೆ (ಮಕ್ಕಳ ಕವಿತೆಗಳು), ಚಟ್ ಪಟ್ ಚುಟುಕು (ಮಕ್ಕಳ ಕವಿತೆಗಳು), ಬಟ್ಟ ಬಯಲಿಗ (ಪ್ರಭುಲಿಂಗ ಲೀಲೆಯ ತ್ರಿಪದಿಯಾನ), ಸತ್ಯದ ಅಮೃತ ಕಥನ (ಮಕ್ಕಳ ಖಂಡ ಕಾವ್ಯ) 

ಇ-ಪುಸ್ತಕಗಳು: ಮುತ್ತು ಮತ್ತು (ಚುಟುಕುಗಳು), ಉಸಿರುಂಟು ಹೆಸರಿಲ್ಲ (ಮಕ್ಕಳ ಕವಿತೆಗಳು), ಲಾಗಾ ಹಾಕೋದು ಹೆಂಗ (ಶಿಶು ಪ್ರಾಸಗಳು), ರೇಶ್ಮೆ ಅಂಗಿ ಚಿಟ್ಟೆ (ಶೊಶ ಪ್ರಾಸಗಳು), ಚಿಲಿಪಿಲಿ ಹಾಡು (ಮಕ್ಕಳ ಕವಿತೆಗಳು-ಧ್ವನಿಸುರುಳಿ)

ಪ್ರಶಸ್ತಿ-ಪುರಸ್ಕಾರಗಳು: ಬೆಣ್ಣೆಹಳ್ಳ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಬಿ.ಎಂ.ಶ್ರೀ ಪ್ರತಿಷ್ಠಾನ ಪ್ರಶಸ್ತಿ, ಟೂ..ಟೂ...ಬಿಟ್ಟೀನಿ ಕೃತಿಗೆ ವಜಯ ಪ್ರಕಾಶನದಿಂದ ಮಕ್ಕಳ ರತ್ನ ಪ್ರಶಸ್ತಿ, ವಿಜಯಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಧಾರವಾಡ ಚಿಲಿಪಿಲಿ ಪ್ರಕಾಶನದ ಶಿಕ್ಷಣ ಸಿರಿ ರಾಜ್ಯ ಪ್ರಶಸ್ತಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಗೌರವ ಪ್ರಶಸ್ತಿಗಳು ಲಭಿಸಿವೆ.

ಚಂದ್ರಗೌಡ ಕುಲಕರ್ಣಿ