ಧಾರಣಿ ಎಂತಲೇ ಪರಿಚಿತರಾಗಿದ್ದ ಕವಯತ್ರಿ ಶಾಂತಾ ಶಶಿಕಿರಣ ಅವರು ಜನಿಸಿದ್ದು 1931 ಏಪ್ರಿಲ್ 1ರಂದು. ಶಿವಮೊಗ್ಗ ಜಿಲ್ಲೆ ಹೊಸನಗರದವರು. ತಾಯಿ ಚಿನ್ನಮ್ಮ, ತಂದೆ ಮಾಯಪ್ಪಶೆಟ್ಟಿ.
ಇವರು ಬರೆದ ಪ್ರಮುಖ ಕೃತಿಗಳೆಂದರೆ ಸೀತಾಳೆ, ಶಿಲಾಶ್ರೀ, ಭಕ್ತಿಗೀತೆಗಳು, ಚಿಪ್ಪಿನೊಳಗಿನ ಮುತ್ತು, ಭವದತ್ತಾ, ಅಂಜನಾ ಮುಂತಾದವು. ಇವರ ಶಕ್ತಿಶ್ರೀ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಬಂದಿದೆ.