About the Author

ಕೆ. ಸೀತಾರಾಮ ಭಟ್ ಅವರು ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಕಾಡೂರುನವರು. ಅವರ ಮನೆ ಭಾಷೆ ಮಲೆಯಾಳಂ. ಆದರೂ, ಕನ್ನಡ ಸಾಹಿತ್ಯದಲ್ಲಿ ಒಲವುಳ್ಳವರು. ಮೈಸೂರು ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, I.I.T. ಮದ್ರಾಸ್‌ನಿಂದ ಪಿಎಚ್‌.ಡಿ ಪದವಿ ಪಡೆದಿದ್ಧಾರೆ. ಸುಮಾರು 30 ವರುಷಗಳಿಂದ ಕೇಂದ್ರದ ರಕ್ಷಣಾ ಇಲಾಖೆಯ ಡಿ.ಆರ್.ಡಿ.ಒ.ದಲ್ಲಿ ಕೆಲಸ ಮಾಡಿ, 2016ರಲ್ಲಿ ನಿವೃತ್ತರಾದರು. ಅವರ ವೈಜ್ಞಾನಿಕ ಸಾಧನೆಗಳನ್ನು ಗುರುತಿಸಿ ಕೇಂದ್ರ ಸರಕಾರ ಎರಡು ಸಲ ರಾಷ್ಟ್ರ ಮಟ್ಟದ ಪುರಸ್ಕಾರಗಳನ್ನು ನೀಡಿ ಗೌರವಿಸಿದೆ. ‘ನವಿಲುಗರಿ’ ಅವರ ಕವನ ಸಂಕಲನ.

ಕೆ. ಸೀತಾರಾಮ ಭಟ್