About the Author

ಪತ್ರಕರ್ತ, ಬರಹಗಾರ ಕುಮಾರ ಬುರಡಿಕಟ್ಟಿ ಅವರು 1978 ಏಪ್ರಿಲ್ 7ರಂದು ಜನಿಸಿದರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಡೆನಂದಿಹಳ್ಳಿ ಇವರ ಹುಟ್ಟೂರು. ಪ್ರಾಥಮಿಕ- ಪ್ರೌಢಶಿಕ್ಷಣವನ್ನು ಕಡೇನಂದಿಹಳ್ಳಿ ಮತ್ತು ಹಿರೇಕೇರೂರಿನಲ್ಲಿ ಪಡೆದರು. ಶಿವಮೊಗ್ಗದಲ್ಲಿ ಕಾಲೇಜು ಶಿಕ್ಷಣ. ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಚಳವಳಿಗಳಲ್ಲಿ ಭಾಗಿಯಾಗುತ್ತ ಬಂದಿರುವ ಕುಮಾರ ಅವರು ದೆಹಲಿ, ಮುಂಬೈಗಳಲ್ಲಿ ನೆಲೆಸಿದ್ದರು. 2002ರ ಗುಜರಾತ್ ನರಮೇಧ, ಹರಿಯಾಣದ ಜಝಾರ್‌ನಲ್ಲಿ ನಡೆದ ದಲಿತರ ಮಾರಣಹೋಮ ಮುಂತಾದ ಘಟನೆಗಳ ಬಗ್ಗೆ ರಾಷ್ಟ್ರಮಟ್ಟದ ಸತ್ಯಶೋಧನಾ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೆಲಕಾಲ ಲಂಕೇಶ್ ವಾರಪತ್ರಿಕೆಯಲ್ಲಿ, ಸಂಡೇ ಇಂಡಿಯನ್ ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡಿರುವ ಅವರು ಸದ್ಯ ಕಲಬುರಗಿಯಲ್ಲಿ ದ ಹಿಂದು ಪತ್ರಿಕೆಯ ವರದಿಗಾರರಾಗಿದ್ದಾರೆ.

ಓ ಈಳಂ: ಎಲ್ ಟಿಟಿಇ- ವಿರೋಚಿತ ಕದನ ಮತ್ತು ರಕ್ತಸಿಕ್ತ ಕಥನ, ಆಚರಣೆ ಹಾಗೂ ವೈರುದ್ಧ, ಕಾಶ್ಮೀರ: ರಣರಂಗವಾಗಿರುವ ಬೀದಿಗಳು-ಕೆಂಪಗಾಗುತ್ತಿರುವ ಝೇಲಂ, ಜಂಗಲ್ ನಾಮಾ: ಮಾವೋವಾದಿ ಗೆರಿಲ್ಲಾ ವಲಯದೊಳಗೆ ಕೃತಿಗಳನ್ನು ಪ್ರಕಟಿಸಿದ್ದಾರೆ.

 

ಕುಮಾರ ಬುರಡಿಕಟ್ಟಿ

(07 Apr 1978)