About the Author

ಡಾ.ಲಿಂಗರಾಜ ರಾಮಾಪೂರ ವ್ರತ್ತಿಯಲ್ಲಿ ಶಿಕ್ಷಕರು. ಪ್ರವ್ರತ್ತಿಯಲ್ಲಿ ಬರಹಗಾರರು. ಪ್ರಸ್ತುತ ಹುಬ್ಬಳ್ಳಿ ತಾಲೂಕು ಕಿರೇಸೂರ ಸರಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯದ ಎಲ್ಲ ಪ್ರಕಾರಗಳ ಕ್ರಷಿ ಮಾಡಿದ್ದಾರೆ. 25ಕೂ ಹೆಚ್ಚು ಕೃತಿ ರಚಿಸಿದ್ದಾರೆ. 200ಕೂ ಹೆಚ್ಚು ಲೇಖನ ಪ್ರಕಟಿಸಿದ್ದಾರೆ. ಹುಗ್ಗಿ ಅಂದ್ರ ಹಿಂಗೈತಿ, ಪುಟ್ಟರಾಜ, ಭೂಮಿ ಮಾರಾಟಕ್ಕಿಲ್ಲ, ನಿಸಗ೯ ನ್ಯಾಯ, ನೀರ್ ಬಾರ್ ಮಕ್ಕಳ ನಾಟಕ ಕೃತಿಗಳು. ಪರಿಸರದೊಳಗಿನ ಸತ್ಯದ ಮಾತು, ವಿಜ್ಞಾನದ ಬೆಳಕಿನಲ್ಲಿ ಇವು ಬರಹಗಳನ್ನೊಳಗೊಂಡ ಕೃತಿಗಳು. ಗುಬ್ಬಿಗೊಂದು ಮನೆ ಮಾಡಿ ಮಕ್ಕಳ ಕಾದಂಬರಿ. ಶಿಕ್ಷಕನ ನೋಟದಲ್ಲಿ ಅಮೇರಿಕಾ, ವಿಜ್ಞಾನದ ಅಲೆದಾಟ ಇವು ಪ್ರವಾಸ ಕಥೆಗಳು. ವೈಜ್ಞಾನಿಕ ಕಥೆಗಳು, ದೊಡ್ಡವರು ಚಿಕ್ಕವರಿದ್ದಾಗ ಕಥಾ ಸಂಕಲನ .ಚಿಣ್ಣರ ಸಕ೯ಸ್, ವಿಜ್ಞಾನ ಮಯಿ, ಚಿರಸ್ಮರಣೆ ಕವನ ಸಂಕಲನಗಳು. ಗುಬ್ಬಿಗೊಂದು ಮನೆಯ ಮಾಡಿ ಕ್ರತಿಗೆ ಗ್ರಂಥಪಾಲಕ ಹೊಂಬಳ ಪ್ರಶಸ್ತಿ, ವಿಜ್ಞಾನದ ಅಲೆದಾಟ ಕ್ರತಿಗೆ ಬಾಲವಿಕಾಸ ಆಕಾಡೆಮಿ ಪುಸ್ತಕ ಚಂದಿರ ಪ್ರಶಸ್ತಿ ಪುರಸ್ಕೃತರು.

ಲಿಂಗರಾಜ ರಾಮಾಪೂರ

(22 Jul 1978)

Books by Author

BY THE AUTHOR