About the Author

ಮುಕ್ತಾ ಸಿ. ಎನ್. ಅವರು ಮೂಲತಃ ಚಿತ್ರದುರ್ಗದವರು. 1951 ಏಪ್ರಿಲ್ 30ರಂದು ಜನನ. ಸಹಾಯಕ ಶಿಕ್ಷಕಿಯಾಗಿ ನಂಜನಗೂಡಿನ ಬಾಲಕಿಯರ ವಸತಿ ಸಹಿತ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ತಂದೆ ಸಿ.ಬಿ ನರಸಿಂಹಮೂರ್ತಿ, ತಾಯಿ – ಸಿ.ಎನ್ ಕಮಲಮ್ಮ. ಚಿಕ್ಕಂದಿನಲ್ಲೇ ಸಾಹಿತ್ಯದ ಒಡನಾಟದಲ್ಲಿ ಬೆಳೆದ ಮುಕ್ತಾ ಅವರು ಸಾಹಿತ್ಯ ಕೃಷಿಯಲ್ಲಿ ತಮ್ಮದೇ ಬರಹಗಳ ಮೂಲಕ ಮನೆಮಾತಾಗಿದ್ದಾರೆ.

1953 ರಲ್ಲಿ ಆಶ್ರಯ, 1975 ರಲ್ಲಿ ಮರೀಚಿಕೆ, 1982  ರಲ್ಲಿ ವಿಮುಕ್ತೆ,  1983 ರಲ್ಲಿ ದಡ ಸೇರಿದ ನೌಕೆ, ಸುವರ್ಣ ಸಂಕೋಲೆ, ನನಸಾಗದ ಕನಸು, ಸುಖದ ಸೋಪಾನಗಳು, ಒಲವಿನ ಉಯ್ಯಾಲೆ, ಕಳೆದು ಹೋದವರು ಮುಂತಾದವುಗಳು ಇವರ ಪ್ರಕಟಿತ ಕೃತಿಗಳಾಗಿವೆ. ಸುಮಾರು 50ಕ್ಕು ಹೆಚ್ಚು ಕಾದಂಬರಿ, 8 ಕಿರುಕಾದಂಬರಿಗಳನ್ನು ರಚಿಸಿದ್ದಾರೆ. ಇವರ ಅನೇಕ ಕಾದಂಬರಿಗಳು ಸುಧಾ ವಾರಪತ್ರಿಕೆ, ಗೆಳತಿ, ಮಲ್ಲಿಗೆ, ಸಂಯುಕ್ತ ಕರ್ನಾಟಕ, ಮಂಜುವಾಣಿ, ವನಿತಾ, ಮಂಗಳ, ಕರ್ಮವೀರಗಳಲ್ಲಿ ಪ್ರಕಟಣೆ ಕಂಡು ಜನ ಮೆಚ್ಚುಗೆಯನ್ನು ಪಡೆದಿವೆ. ಅವರ ‘ಗೆಲುವಿನ ಹೆಜ್ಜೆ’ ಕಾದಂಬರಿಗೆ ವನಿತಾ ಯುಗಾದಿ ಕಾದಂಬರಿ ಸ್ಫರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಪಡೆದುಕೊಂಡಿದೆ. ಅವರ ‘ವಿಮುಕ್ತೆ’ ಮತ್ತು ‘ಮೇಘ ಮಂದಾರ’ ಕಾದಂಬರಿಗಳು ‘ದೋಣಿಸಾಗಲಿ’ (ನಿರ್ದೇಶನ-ರಾಜೇಂದ್ರಸಿಂಗ್‌ ಬಾಬು) ಮತ್ತು ‘ಮಿಸ್‌ ಕ್ಯಾಲಿಫೋರ್ನಿಯ’ (ನಿರ್ದೇಶನ-ಕೋಡ್ಲು ರಾಮಕೃಷ್ಣ) ಎಂಬ ಹೆಸರಿನಿಂದ ಚಲನಚಿತ್ರಗಳಾಗಿರುವುದು ಅವರ ಪ್ರತಿಭೆ ಸಾಕ್ಷಿ. 

ಅವರ ಸಾಹಿತ್ಯ ಸೇವೆಗೆ ಆರ್ಯಭಟ ಪ್ರಶಸ್ತಿ, ಅತಿಮಬ್ಬೆ ಪ್ರಶಸ್ತಿ, ತ್ರಿವೇಣಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದವು ಲಭಿಸಿವೆ. 

ಮುಕ್ತಾ ಸಿ. ಎನ್.