About the Author

ಹೊಸಪೇಟೆಯ ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿರುವ ನಾಗಣ್ಣ ಕಿಲಾರಿ ಅವರು ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನವರು.  ಸಿದ್ಧಗಂಗಾ ಹೈಸ್ಕೂಲ್ ಮತ್ತು ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ನಾಗಣ್ಣ ಅವರು ಸಿಂಧನೂರು, ಮಸ್ಕಿ ಪದವಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಭರವಸೆ ಮೂಡಿಸಿರುವ ಕವಿಗಳಲ್ಲಿ ಒಬ್ಬರಾಗಿರುವ ನಾಗಣ್ಣ ಅವರು ನಾಲ್ಕು ಸಂಕಲನಗಳನ್ನು ಪ್ರಕಟಿಸಿದ್ದಾರೆ. ಲಂಕೇಶ್ ಅವರ ನೀಲು ಪದ್ಯಗಳ ಕುರಿತು 'ಪ್ರೇಮ ಮೀಮಾಂಸೆ' ಪ್ರಕಟವಾಗಿದೆ.

ನಾಗಣ್ಣ ಕಿಲಾರಿ

(01 Jun 1982)