About the Author

ಲೇಖಕ ನಂಜನಗೂಡು ಪಿ.ಗಣೇಶ ಅವರು ಮೂಲತಃ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಶಂಕರಪುರ ಬಡಾವಣೆಯವರು. ತಾಯಿ ದೇವಮ್ಮ ತಂದೆ ಪುಟ್ಟಸ್ವಾಮಿ. ಶಂಕರಪುರ ಬಡಾವಣೆಯ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ನಂಜನಗೂಡು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು , ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ, ಸುತ್ತೂರು (ಬಿ.ಇಡಿ) ಹಾಗೂ ಚಾಮರಾಜನಗರದ  ಜೆ.ಎಸ್.ಎಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ ಪೂರೈಸಿದರು. ಪ್ರಸ್ತುತ ನಂಜನಗೂಡಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಹಾಗೂ ತಾಮಡವಪುರದ ಮಹಾರಾಜ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. 

’ಕುಲುಮೆಗೆ ಬಿದ್ದ ಬದುಕು’ ಕವನ ಸಂಕಲನ ಇವರ ಚೊಚ್ಚಲ ಕೃತಿ. 

ನಂಜನಗೂಡು ಗಣೇಶ

(07 Jul 1993)