About the Author

ಪ್ರಮೀಳಾ ಸ್ವಾಮಿ ಯವರು ಮೂಲತಃ ಮೈಸೂರು ಜಿಲ್ಲೆಯ ಕುಪ್ಪಹಳ್ಳಿಯವರು. ಪದವಿ ಶಿಕ್ಷಣ ಬೆಂಗಳೂರಿನ ಎಂ ಈ ಎಸ್ ಕಾಲೇಜಿನಲ್ಲಿ ಪಡೆದರು. ಸಂಗೀತ ಶಿಕ್ಷಣವನ್ನು ಹೆಸರಾಂತ ವಿದ್ವಾಂಸರಾದ ಆರ್ ಆರ್ ಕೇಶವಮೂರ್ತಿಗಳಿಂದ ಪಡೆದು, ಆಕಾಶವಾಣಿಯಲ್ಲಿ ಹಾಡುತ್ತಿದ್ದರು. ಹಾಗೆಯೇ ನಾಟಕದಲ್ಲಿ, ಬರೆಯುವುದರಲ್ಲಿ ಮೊದಲಿನಿಂದಲೂ ಆಸಕ್ತಿ ಇದ್ದು, ಆಕಾಶವಾಣಿ ಮಹಿಳಾ ಹಾಗು ಮಕ್ಕಳ ಕಾರ್ಯಕ್ರಮಕ್ಕೆ ಅನೇಕ ನಾಟಕಗಳನ್ನೂ, ಹಾಡುಗಳನ್ನು ಬರೆದಿದ್ದಾರೆ. ಇವರ ಕಥೆಗಳು ಪ್ರಬಂಧಗಳು ತರಂಗ ಹಾಗು ಸುಧಾದಲ್ಲಿ ಪ್ರಕಟವಾಗಿದ್ದು, ಸಂಕೇತಿ ಸಂಗಮ ಎನ್ನುವ ಸಮುದಾಯ ಪತ್ರಿಕೆಯಲ್ಲೂ ಪ್ರಕಟವಾಗಿವೆ. ಅಡುಗೆಯಲ್ಲಿ ಅಪಾರ ಆಸಕ್ತಿ ಇರುವ ಇವರು ವಯಸ್ಕರ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಬೇಕಿಂಗ್  ಹಾಗು ಇತರ ಖಾದ್ಯಗಳ ತಯಾರಿಕೆಯ ತರಬೇತಿ ಅನೇಕರಿಗೆ ನೀಡಿದ್ದಾರೆ. ಊರೆಂಬ ಉದರ ಇವರ ಮೊದಲನೆಯ ಪುಸ್ತಕ. 

ಪ್ರಮೀಳಾ ಸ್ವಾಮಿ