About the Author

ಪ್ರವರ ಕೊಟ್ಟೂರು ಹುಟ್ಟಿದ್ದು 1990 ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ. ಅಲ್ಲಿಯೇ ಬಿ.ಎಸ್ಸಿ. ನಂತರ ಬೆಂಗಳೂರಿನ SMRIT ಕಾಲೇಜಿನಲ್ಲಿ ಎಂ.ಸಿ.ಎ. ವ್ಯಾಸಂಗ ಮುಗಿಸಿ, ಸಧ್ಯಕ್ಕೆ ಹೊಸದುರ್ಗ ಪದವಿ ಕಾಲೇಜೊಂದರಲ್ಲಿ ಗಣಕಯಂತ್ರ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಓದು-ಬರವಣಿಗೆ, ಪೋಟೋಗ್ರಾಫಿ, ಚಾರಣ -ಸುತ್ತಾಟದೊಂದಿಗೆ ನಿಕಟ ಸಂಪರ್ಕ ಬೆಸೆದುಕೊಂಡಿರುವ ಅವರು ಚೆಂದನೆಯ ಕವಿತೆಗಳನ್ನು ಬರೆಯುತ್ತಾರೆ. ‘ಅಜೀಬು ದುನಿಯಾ' ಅವರ ಮೊದಲ ಕವನ ಸಂಕಲನ 2013 ಪ್ರಕಟವಾಯಿತು. ಈ ಕವನ ಸಂಕಲನಕ್ಕೆ ಸೇಡಂ ನ ‘ಅಮ್ಮ ಪ್ರಶಸ್ತಿ’ ಮತ್ತು ‘ಕ.ಸಾ.ಪ ದ ಅರಳು ಸಾಹಿತ್ಯ ಪ್ರಶಸ್ತಿ’ ದೊರತಿದೆ. ‘ಒಂದು ಮತ್ತಿನಿಂದ ಕೊಲ್ಲಬಹುದು’ ಅವರ ಮತ್ತೊಂದು ಕವನ ಸಂಕಲನ ಇತ್ತಿಚೆಗೆ ಪ್ರಕಟವಾಗಿದೆ.

ಪ್ರವರ ಕೊಟ್ಟೂರು