About the Author

ಕವಿ ರಾಜಶೇಖರ ಬಂಡೆ ಮೂಲತಃ ಕನಕಪುರದವರು. ರಾಮನಗರ ಜಿಲ್ಲೆ, ಕನಕಪುರ ತಾಲೂಕಿನ ಚಿಕ್ಕಕುರುಬರಹಳ್ಳಿ ಅವರ ಹುಟ್ಟೂರು. ಪಕ್ಕದ ಮನೆಯನ್ನ ಸುಡುತ್ತಿರುವ ಬೆಂಕಿ ತನ್ನದೇ ಮನೆಗೆ ತಾಗುವವರೆಗೆ ಅದೊಂದು ಚರ್ಚೆಯ ವಿಷಯವಾಗಿರುತ್ತದೆ. ಆಮೇಲಷ್ಟೇ ಅದನ್ನ ನಂದಿಸುವ ಕೆಲಸಗಳು ಜಾರಿಯಾಗುತ್ತವೆ' ಎನ್ನುವ ರಾಜಶೇಖರ್ ಸದ್ಯ ಕನ್ನಡ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಫ್ರೆಂಚ್ ನ ನವ್ಯಕವಿ ಚಾರ್ಲ್ಸ್ ಬೋದಿಲೇರ್ ಪ್ರಭಾವಕ್ಕೆ ಒಳಗಾಗುತ್ತಲೇ ಕನ್ನಡ ಕಾವ್ಯಲೋಕಕ್ಕೆ ಸಿಕ್ಕ ಪ್ರತಿಭಾವಂತ ಕವಿ ರಾಜಶೇಖರ ಬಂಡೆ. ರಾಜಶೇಖರ್ ಅವರಿಗೆ ಸೃಜನಶೀಲ ಬರವಣಿಗೆಗಾಗಿ 2017ನೇ ಸಾಲಿನ ಟೋಟೋ ಪ್ರಶಸ್ತಿ ಲಭಿಸಿದೆ. ಅವರ ಮೊದಲ ಕವನ ಸಂಕಲನ ‘ಚಿಟ್ಟಿ ರೆಕ್ಕೆಯ ರೇಟು’ ಈಗಾಗಲೇ ಪ್ರಕಟಗೊಂಡಿದೆ. 

ರಾಜಶೇಖರ ಬಂಡೆ

(26 Mar 1990)