About the Author

ಸೈಫ್ ಜಾನ್ಸೆ ಕೊಟ್ಟೂರು ಎಂತಲೇ ಪರಿಚಿತರಾಗಿರುವ ಆರ್.ಎಸ್. ಸೈಫುಲ್ಲಾ ಅವರು ಜನಿಸಿದ್ದು 1978 ಅಕ್ಟೋಬರ್ 7ರಂದು. ಹುಟ್ಟೂರು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರು. ಸ್ನಾತಕೊತ್ತರ ಪದವಿ ಪಡೆದಿರುವ ಇವರ ಪ್ರಸ್ತುತ ಸಂಡೂರು ತಾಲ್ಲೂಕಿನ ಮಲ್ಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  

ಸಾಹಿತ್ಯದೆಡೆಗಿನ ಒಲವಿನಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಸೈಫ್‌ ಅಯ್ಯಂಗಾರಿಯ ಹತ್ತು ಪೈಸೆಯ ಬೆಡ್ರು ಇವರ ಚೊಚ್ಚಲ ಕವನ ಸಂಕಲನವಾಗಿದೆ. ಈ ಕವನ ಸಂಕಲನಕ್ಕೆ ಅರಳು ಸಾಹಿತ್ಯ ಪ್ರಶಸ್ತಿ, ದ.ರಾ.ಬೇಂದ್ರೆ ಗ್ರಂಥ ಬಹುಮಾನ ಪುರಸ್ಕಾರಗಳು ದೊರೆತಿವೆ. ಇವರ ಹುಲ್ಲಿಗೆ ಹುಟ್ಟಿದ ಬೀದಿ ಕವನ ಸಂಕಲನ ಇಷ್ಟರಲ್ಲಿಯೇ ಪ್ರಕಟವಾಗಲಿದೆ.  

ರಾಜ್ಯ ಮಟ್ಟದ ಕವನ ವಾಚನ ಗೋಷ್ಠಿಗಳಲ್ಲಿ ಭಾಗವಹಿಸಿರುವ ಇವರ ಹಲವು ಕವಿತೆಗಳನ್ನು ಇಂಗ್ಲಿಷ್ ಮತ್ತು ತೆಲುಗು ಭಾಷೆಗೆ ಅನುವಾದ ಮಾಡಲಾಗಿದೆ.

ಸೈಫ್ ಜಾನ್ಸೆ ಕೊಟ್ಟೂರು

(07 Oct 1978)