About the Author

ಶೈಲಜಾ ಪ್ರಸಾದ್ ಅವರು ಮೂಲತಃ ಮೈಸೂರಿನ ಕಿಕ್ಕೇರಿಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವೀಧರರು. ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆಯ ಸದಸ್ಯರು. ಮಳೆ ನಿಂತ ಮೇಲೆ-ಕಥಾ ಸಂಕಲನ. ಬಾನಂಗಳದಲ್ಲಿ-ಪ್ರಬಂಧ ಸಂಕಲನ. ಅಗೋಚರ-ಇವರ ಕಾದಂಬರಿ.

ಬೆಂಗಳೂರು ಆಕಾಶವಾಣಿಯಲ್ಲಿ ‘ಕರುಣಾಳು ಬಾ ಬೆಳಕೆ’ ಕಥೆ ವಾಚನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಲೇಖಿಕಾ ಸಾಹಿತ್ಯ ವೇದಿಕೆಯಿಂದ ಸನ್ಮಾನ, ಅಕ್ಕನ ಮನೆ ಪ್ರತಿಷ್ಠಾನದಿಂದ ರಾಜ್ಯ ಮಟ್ಟದ ದೇಸಿ ದಿಬ್ಬಣ ಪ್ರಶಸ್ತಿ-2020ರಲ್ಲಿ ಇವರ ಪ್ರಬಂಧಕ್ಕೆ ಬಹುಮಾನ, ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ ಸೇವಾ ರತ್ನ ಪ್ರಶಸ್ತಿ ಲಭಿಸಿದೆ.

ಶೈಲಜಾ ಪ್ರಸಾದ್

(07 Nov 1961)