About the Author

ಲೇಖಕ ಶಿವರಾಜ ವತ್ತುಮುರುವಣಿ ಅವರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ದತ್ತುಮುರವಣಿ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಸಿರಗುಪ್ಪದಲ್ಲಿ ಪ್ರೌಢಶಿಕ್ಷಣ, ಬಳ್ಳಾರಿಯಲ್ಲಿ ಪಿಯುಸಿ, ಬೆಂಗಳೂರಿನಲ್ಲಿ ಬಿ.ಎ. ಪೂರ್ಣಗೊಳಿಸಿದರು. ಶ್ರೀ ನಾದಬ್ರಹ್ಮ ತ್ಯಾಗರಾಜ್ ಸಂಗೀತ ನೃತ್ಯ ಅಕಾಡೆಮಿಯ ನಂದ್ಯಾಲ ಚಂದ್ರಿಕಾ ಅವರ ಬಳಿ ಕೂಚಿಪುಡಿ ನೃತ್ಯ ತರಬೇತಿ ಪಡೆದು ನಂತರ ಅವರೇ ಶಿವ ನೃತ್ಯ ಪ್ರಿಯ ಸಂಗೀತ ಅಕಾಡೆಮಿ ಸ್ಥಾಪಿಸಿ, ಬಡವ, ಆಸಕ್ತ, ವಿಶೇಷವಾಗಿ ವಿಕಲ ಚೇತನರಿಗೆ ಉಚಿತವಾಗಿ ನೃತ್ಯ ತರಬೇತಿ ನೀಡುತ್ತಿದ್ದಾರೆ. ರಘುವನ ಹಳ್ಳಿಯ ಶ್ರೀ ಸ್ಕಂದ ಮಾತಾ ಕಲಾ ಕೇಂದ್ರದಲ್ಲಿ ನೃತ್ಯ ಶಿಕ್ಷಕರಾಗಿದ್ದಾರೆ. ಜಾನಪದ ಗಾಯಕರೂ ಆಗಿದ್ದು, ನಾಟಕದಲ್ಲಿ ಅಭಿನಯ, ಕಥೆ-ಕವನ ರಚನೆ ಇವರ ಹವ್ಯಾಸಗಳು.

ಶಿವರಾಜ ವತ್ತುಮುರವಣಿ

(11 Jun 1993)