About the Author

ಲೇಖಕ, ಪತ್ರಕರ್ತ ಟಿ.ಎನ್. ಷಣ್ಮುಖ ಅವರು ಹುಟ್ಟಿದ್ದು 1960 ಏಪ್ರಿಲ್ 29ರಂದು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯವರಾದ ಷಣ್ಮುಖ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್, ಅಗ್ನಿ ವಾರ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡಿರುವ ಇವರು ಪ್ರಜಾಕೂಗು ಎಂಬ ವಾರ ಪತ್ರಿಕೆಯನ್ನು ಒಂದು ದಶಕಕ್ಕೂ ಹೆಚ್ಚು ಕಾಲ ಹೊರತಂದರು. ಎಂಬತ್ತರ ದಶಕದಲ್ಲಿ ಚಟುವಟಿಕೆಯಿಂದಿದ್ದ ಪ್ರಗತಿ ರಂಗ ಸಾಂಸ್ಕೃತಿಕ ಮತ್ತು ರಾಜಕೀಯ ರಂಗದ ಸಂಚಾಲಕನಾಗಿ ಕೆಲಸ ಮಾಡಿದ್ದಾರೆ. 

ಷಣ್ಮುಖ ಅವರ ಪ್ರಮುಖ ಕೃತಿಗಳೆಂದರೆ ನೆತ್ತರಿಗೆ ಬೆಲೆಯಿಲ್ಲ, ಒಡಲಾಳ, ಕಡಲತೀರದ ಕೋಮಲ ಹುಡುಗಿ, ಮುಖ ಮತ್ತು ಮುಖವಾಡಗಳು (ಲೇಖನಗಳ ಸಂಗ್ರಹ). ಬಿರುಕುಗಳಲ್ಲಿ ಯಾರದೋ ನಿಟ್ಟುಸಿರು (ಕವನ ಸಂಕಲನ). ಅನಾವರಣ, ಪರವರ್ತನೆ, ಗೌರಿ, ಚಲುವ, ದಂಗೆ ಎದ್ದವರು, ಮೌನದ ಸನ್ನಿಧಿಯಲ್ಲಿ (ಕಾದಂಬರಿ). ಗರ್ಭಗುಡಿ ಮತ್ತು ಇತರ ಕಥೆಗಳು ಮುಂತಾದವು. 

ಟಿ.ಎನ್. ಷಣ್ಮುಖ

(29 Apr 1960)