೨೮ ಕತೆ-೧೪ ಚಿತ್ರ

Author : ಜಿ.ಪಿ. ರಾಜರತ್ನಂ

Pages 96




Year of Publication: 1950
Published by: ಮನೋಹರ ಗ್ರಂಥ ಮಾಲಾ
Address: ಧಾರವಾಡ

Synopsys

ಗೌತಮ ಬುದ್ಧನ ಪೂರ್ವಜನ್ಮದ ಕಥೆಗಳಿಗೆ ಜಾತಕ ಎಂದು ಹಾಗೂ ಬುದ್ಧನ ಶಿಷ್ಯರಾದ ಭಿಕ್ಷು ಹಾಗೂ ಭಿಕ್ಷುಣಿಯರ ಪೂರ್ವಜನ್ಮದ ಕಥೆಗಳಿಗೆ ಅವಧಾನ ಎಂತಲೂ ಕರೆಯುತ್ತಾರೆ. ಬುದ್ಧನ ವಚನ, ಪಾಲಿ ಭಾಷೆಯಲ್ಲಿರುವ ಬೌದ್ಧ ಧರ್ಮ ಸಾಹಿತ್ಯಕ್ಕೆ ಬೌದ್ಧರು ಲಕ್ಷಣ ಕೊಡುವ ಒಂಭತ್ತು ಅಂಗಗಳಲ್ಲಿ ಜಾತಕ ಎಂಬುದು ಏಳನೆಯದು. ಇದನ್ನೇ ತಿಪಿಟಿಕ ಎಂದೂ ಕರೆಯುತ್ತಾರೆ. ಕೆಲವು ಜಾತಕಗಳು ಸ್ವತಃ ಬುದ್ಧನೇ ಹೇಳಿದ್ದು, ಮತ್ತೇ ಕೆಲವು ಆತನ ಶಿಷ್ಯರು ಹೇಳಿದ್ದು ಎನ್ನಲಾಗುತ್ತದೆ. ಈ ಯಾವುದಕ್ಕೂ ಆಧಾರಗಳಿಲ್ಲ. ಆದರೆ, ಇವು ಸಂಕಲನಗೊಂಡಿವೆ. ಅಂದಿನ ಕಾಲದ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಸಹಕಾರಿಯಾಗಿವೆ. ಬಕ, ಗಾಂಗೇಯ, ಉಲೂಕ, ಚರ್ಮಶಾಟಕ, ನೃತ್ತ, ದರ್ಭಪುಷ್ಪ, ಕುರಂಗಮೃಗ, ಸುಜಾತ, ಮಾಂಸ, ಕಾತ್ಯಾಯಿನಿ ಹೀಗೆ ಒಟ್ಟು 28 ಜಾತಕಗಳ ಕಥೆಗಳಿವೆ. ಇವುಗಳಿಗೆ ಸಂಬಂಧಿಸಿದಂತೆ ಒಟ್ಟು 14 ಚಿತ್ರಗಳಿವೆ. ಆದ್ದರಿಂದ, ಕೃತಿಯ ಪ್ರಮುಖ ಶೀರ್ಷಿಕೆಯೂ ಇದೇ ಆಗಿದೆ. ಇಲ್ಲಿಯ ಕಥೆಗಳು ನೀತಿಬೋಧಕವೂ ಆಗಿವೆ.

About the Author

ಜಿ.ಪಿ. ರಾಜರತ್ನಂ
(05 December 1904 - 13 March 1979)

ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...

READ MORE

Related Books