ಎ.ಎನ್. ಮೂರ್ತಿರಾವ್

Author : ಶಾಂತಾರಾಮ ಪ್ರಭು

Pages 112

₹ 60.00




Year of Publication: 2005
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

ಎ.ಎನ್. ಮೂರ್ತಿರಾವ್ (ಅಕ್ಕಿಹೆಬ್ಬಾಳು ನರಸಿಂಹಮೂರ್ತಿರಾಯರು) ಅವರು ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿ. ಪರಿಪಕ್ವ ಮನಸ್ಸಿನ, ಉದಾರ ಹೃದಯದ, ಆಳವಾದ ಪಾಂಡಿತ್ಯದ, ಆತ್ಮಾವಲೋಕನ ಪ್ರವೃತ್ತಿಯ, ಪುರೋಗಾಮಿ ನಿಲುವಿನ, ಕಲಾತ್ಮಕ ಧ್ಯೇಯ ನಿಷ್ಠೆಯ ಸಾಹಿತಿ. ಕನ್ನಡ ಗದ್ಯ ನಿರ್ಮಾಪಕರಲ್ಲಿ ಒಬ್ಬರಾಗಿರುವ ಅವರು ಸಾಹಿತ್ಯ ಲೋಕದಲ್ಲಿ ಪ್ರಮುಖ ಸಾಹಿತಿ. ಬದುಕು-ಬರೆಹಗಳೆರಡರಲ್ಲಿಯೂ ಅತ್ಯುನ್ನತ ಧ್ಯೇಯ-ಆದರ್ಶಗಳ ಪ್ರತೀಕವಾಗಿದ್ಥಂತಹವರು. ಇವರು ಅನೇಕ ವಿಮರ್ಶ ಬರಹಗಳನ್ನು, ಲಲಿತ ಪ್ರಬಂಧಗಳನ್ನು, ಅನುವಾದಗಳು, ಲೇಖನ ಸಂಗ್ರಹಗಳನ್ನು ರಚಿಸಿದ್ದಾರೆ. ಎ.ಎನ್. ಮೂರ್ತಿರಾವ್ ರಾವ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟದ್ದು ’ಚಿತ್ರಗಳು ಪತ್ರಗಳು’ ಕೃತಿ.

ಎ.ಎನ್. ಮೂರ್ತಿರಾವ್ ಅವರ ಬದುಕು ಮತ್ತು ಸಾಧನೆಯನ್ನು ಪರಿಚಯಿಸುವ ಕೃತಿಯ ಲೇಖಕರು ಶಾಂತಾರಾಮ ಪ್ರಭು.

About the Author

ಶಾಂತಾರಾಮ ಪ್ರಭು

ಮಲೆನಾಡಿಗರ ಹೆಮ್ಮೆಯ ನಡೆದಾಡುವ ಶಬ್ದಕೋಶ ಎಂದೇ ಪ್ರಖ್ಯಾತರಾದವರು ನಿಟ್ಟೂರಿನ ಶಾಂತಾರಾಮ ಪ್ರಭು. 37 ವರ್ಷ ಇಂಗ್ಲಿಷ್‌ ಉಪನ್ಯಾಸಕರಾಗಿದ್ದು, ನಿಟ್ಟೂರು ಪದವಿಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸದಾ ಕ್ರಿಯಾಶೀಲರು,ನಿಗರ್ವಿಗಳು ಹಾಗು ನಿರಂತರ ಅಧ್ಯಯನ ಶೀಲರಾದ ಅವರು ಎಂಟು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ.  ಯಕ್ಷ ಗಾನ ಕ್ಷೇತ್ರದಲ್ಲಿ ಕೊಡಲ್ಪಡುವ ಅನೇಕ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿದ್ದು, ಯಕ್ಷ ಸ್ವರ್ಣ,ಯಕ್ಷ ವಶಿಷ್ಟ ಹಾಗು ಉಡುಪಿಯ ಕಲಾರಂಗ ಸಂಸ್ಥೆ ನೀಡಿದ 'ಪೆರ್ಲ ಕೃಷ್ಣಭಟ್‌' ಪ್ರಶಸ್ತಿಗಳು ಪ್ರಮುಖವಾದವು. ತಮ್ಮ ಪೂರ್ಣ ಜೀವನವನ್ನು ಸಾಹಿತ್ಯದ ಅಧ್ಯಯನ ಹಾಗು ಯಕ್ಷ ಗಾನ ತಾಳಮದ್ದಳೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ...

READ MORE

Related Books