ಅ ಒಳಗಿನ ಬಿಕ್ಕಟ್ಟು

Author : ಕೆ.ಪಿ. ಸುರೇಶ್

Pages 94

₹ 100.00




Year of Publication: 2018
Published by: ಅಹರ್ನಿಶಿ ಪ್ರಕಾಶನ
Address: ಜ್ಞಾನವಿಹಾರ ಬಡಾವಣೆ, ಕಂಟ್ರಿ ಕ್ಲಬ್‌ ಎದುರು ವಿದ್ಯಾ ನಗರ ಶಿವಮೋಗ್ಗ.
Phone: 9449174662

Synopsys

‘ ಅ ಒಳಗಿನ ಬಿಕ್ಕಟ್ಟು’ ಕೃತಿಯು ಜಿ.ಎನ್.ದೇವಿ ಅವರ ಬರಹಗಳ ಸಂಕಲನವಾಗಿದೆ. ಕೆ.ಪಿ. ಸುರೇಶ್ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯು ಭಾರತದ ಜ್ಞಾನ ಮತ್ತು ಬಿಕ್ಕಟ್ಟುಗಳ ಕುರಿತ ಕೃತಿಯಾಗಿದೆ. ವಸಾಹತುಶಾಹಿ ಮತ್ತು ಜಾತಿ ವ್ಯವಸ್ಥೆ ಭಾರತದ ಜ್ಞಾನ ಮತ್ತು ಶಿಕ್ಷಣ ವ್ಯವಸ್ಥೆಯ ಮೇಲೆ ಮಾಡಿದ ಪರಿಣಾಮಗಳ ಕುರಿತು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಕೃತಿಯ ಮೊದಲ ಅಧ್ಯಾಯದಲ್ಲಿ ಸ್ವಾತಂತ್ರಾನಂತರ ಭಾರತದ ಅಭಿವೃದ್ಧಿ, ಬೆಳವಣಿಗೆಗೆ ಕಾಣಿಕೆ ನೀಡಬಲ್ಲಂತಹ ಶಿಕ್ಷಿತ ಯುವ ಮನಸ್ಸುಗಳನ್ನು ಸೃಷ್ಟಿಸಲು ಬೇಕಾದ ಶೈಕ್ಷಣಿಕ ಪ್ರಕ್ರಿಯೆ ಮತ್ತು ನಿಯಂತ್ರಕ ಸಂಸ್ಥೆಗಳು ಹೇಗೆ ರೂಪ ಪಡೆಯಿತು ಎನ್ನುವುದರ ಕಡೆಗೆ ಲೇಖಕರು ಗಮನ ಕೊಟ್ಟಿದ್ದಾರೆ. ಎರಡನೇ ಅಧ್ಯಾಯದಲ್ಲಿ ಭಾರತೀಯ ತತ್ತ್ವ ಶಾಖೆಗಳಲ್ಲಿ ಜ್ಞಾನವೆಂದರೇನು ಎಂಬ ಗ್ರಹಿಕೆಯ ಬಗ್ಗೆ ಲೇಖಕರು ವಿವರಿಸುತ್ತಾ. ಉಪನಿಷತ್ತುಗಳಿಂದ ಆರಂಭವಾಗಿ ಧಾರ್ಮಿಕೇತರ ದರ್ಶನ ಮೀಮಾಂಸೆಯಿಂದ ಮುಂದುವರಿದು ಬುದ್ಧ, ಜೈನ, ಸೂಫಿ, ಭಕ್ತಿ ಮತ್ತು ಜಾನಪದ ಪರಂಪರೆಗಳನ್ನು ಮುಂದಿಟ್ಟುಕೊಂಡು ಈ ಅಧ್ಯಾಯವನ್ನು ವಿಶ್ಲೇಷಿಸುವುದನ್ನು ಕಾಣಬಹುದಾಗಿದೆ.

About the Author

ಕೆ.ಪಿ. ಸುರೇಶ್

ಕೆ.ಪಿ. ಸುರೇಶ್ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.  ಸುಸ್ಥಿರ/ಸಾವಯವ ಕೃಷಿ,  ಗಾಂಧೀ ವಿಚಾರಗಳು, ಸಾಹಿತ್ಯ- ವಿಭಿನ್ನ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುವ ಇವರು ಈಗಾಗಲೇ ಎರಡು ಕವನ ಸಂಕಲನ, ಎರಡು ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಅಭಿವೃದ್ಧಿ, ಇವುಗಳ ಬಗ್ಗೆ ಸತತ ಚಿಂತನೆ ನಡೆಸುವ ಇವರು ತೆರೆಯ ಹಿಂದೆಯೇ 'ಅನಾಮಿಕ'ರಾಗಿ ಇರಲು ಬಯಸುವವರು. ಇವರ ಸಾಹಿತ್ಯ ಕೈಂಕರ್ಯ, ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ...

READ MORE

Related Books