ಆದಿವಾಸಿ ಹೋರಾಟಗಾರ ಕೊಮುರಂ ಭೀಮು

Author : ಬಿ. ಸುಜ್ಞಾನಮೂರ್ತಿ

Pages 100

₹ 80.00




Year of Publication: 2017
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಮುಗ್ಧತೆಯೇ ಮೈವೆತ್ತಂತಿದ್ದ ಗೋಂಡಿ ಬುಡಕಟ್ಟಿಗೆ ಸೇರಿದವನು ಕೊಮುರಂ ಭೀಮು. ಇದ್ದಕ್ಕಿದ್ದಂತೆ ನಿಜಾಂ ಸರ್ಕಾರ ಅವನ ಸಮುದಾಯದ ವಿರುದ್ಧ ಹಲ್ಲು ಮಸೆಯುತ್ತದೆ. ಅವರು ವಾಸಿಸುತ್ತಿದ್ದ ಕಾಡಿನ ಮೇಲೆ ದಾಳಿ ಮಾಡುತ್ತದೆ.  ಭೀಮು ತನ್ನ ಜನರನ್ನೆಲ್ಲ ಸಂಘಟಿಸಿ ಅದಕ್ಕೆ ಪ್ರತ್ಯುತ್ತರ ನೀಡುತ್ತಾನೆ. ಹಾಗೆ ಅವನು ನಡೆಸುವ ಹೋರಾಟ ಚಿಕ್ಕದಾದರೂ ಮಹತ್ವದ್ದಾಗುತ್ತದೆ. 

ತೆಲುಗಿನ ಮುಖ್ಯ ಐತಿಹಾಸಿಕ ಕಾದಂಬರಿಗಳಲ್ಲಿ ’ಕೊಮುರಂ ಭೀಮು’ ಒಂದು. ಅವನ ಹೋರಾಟವನ್ನು ಮೊದಲು ಅಕ್ಷರಕ್ಕಿಳಿಸಿದ್ದು ಸಾಹು ಮತ್ತು ಅಲ್ಲಂ ರಾಜಯ್ಯ ಎಂಬ ಹೋರಾಟಗಾರರು. ಕಾಲಾನಂತರ ಚಿಂತಕ ವರವರರಾವ್‌ ಇದನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದರು. ಕನ್ನಡಕ್ಕೆ ’ಕೊಮುರಂ ಭೀಮು ವರ್ತಮಾನದ ಮುಖಾಮುಖಿ’ ಹೆಸರಿನಲ್ಲಿ ಅನುವಾದಿಸಿದವರು ಬಿ. ಸುಜ್ಞಾನ ಮೂರ್ತಿ.

ವರವರರಾವ್‌ ಬರೆದಿರುವ ಸುದೀರ್ಘ ಮುನ್ನುಡಿ ಕೂಡ ಅನೇಕ ಕಾರಣಗಳಿಗೆ ಮುಖ್ಯವಾಗಿದೆ. ಆ ಮುನ್ನುಡಿ ಕುರಿತಂತೆಯೇ ಚರ್ಚೆಗಳು ನಡೆದಿವೆ. ಭೀಮು ಹೋರಾಟಕ್ಕೂ ಈಗ ನಡೆಯುತ್ತಿರುವ ಆದಿವಾಸಿ ಹೋರಾಟಗಳಿಗೂ ಇರುವ ವ್ಯತ್ಯಾಸವನ್ನು ಲೇಖಕರು ಗುರುತಿಸಿದ್ದಾರೆ. ಸಂದಿಗ್ಧತೆಯನ್ನು ಎದುರಿಸುತ್ತಿರುವ ಸಮುದಾಯಗಳು ಕೊಮರಂ ಚಳವಳಿಯಿಂದ ಕಲಿಯಬೇಕಾದ ಪಾಠ ಸಾಕಷ್ಟಿದೆ ಎಂಬುದನ್ನು ಒತ್ತಿ ಹೇಳುತ್ತಾರೆ. 

About the Author

ಬಿ. ಸುಜ್ಞಾನಮೂರ್ತಿ
(06 July 1960)

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಬಿ. ಸುಜ್ಞಾನಮೂರ್ತಿ ಅವರು ಅನುವಾದ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಯಾರದೀ ಕಾಡು, ಅಸಮರ್ಥನ ಜೀವನಯಾತ್ರೆ, ಬೆಕ್ಕಿನ ಆತ್ಮಕತೆ, ನೇಣುಗಂಬದ ನೆರಳಿನಲ್ಲಿ, ನಮಗೆ ಗೋಡೆಗಳಲ್ಲ, ಜಾತಿವಿನಾಪ, ದಲಿತತತ್ವ, ಪುರುಷ ಅಹಂಕಾರಕ್ಕೆ ಸವಾಲ್, ದಲಿತ ಹೋರಾಟಗಾರ ಅರ್ಯ ಕಾಳಿ, ಚಾರ ಮಾರ್ಗವಿನಾಶ, ಪರಿಯಾರ್ ಜೀವನಚಳವಳಿ, ತಿಗುರಿ ತಿರುಗಿಸು ನೇಗಿಲು ಉಳು, ದಲಿತ ರಾಜಕೀಯ, ಆಕಾಶದೇವರು, ಮುಸತಿ ಅಪರಾಧ-ಶಿಕ್ಷೆ, ಸ್ವಾಭಿಮಾನದ ಮದುವೆಗಳು, ಆಸ್ಪಕೃತ, ತೆಲಂಗಾಣ ಹೋರಾಟ ಆದ ಪ್ರಮುಖ ಅನುವಾದಿತ ಕೃತಿಗಳು. ಯಾರದೀ ಕಾಡು ಕಾದಂಬರಿಗೆ ಮತ್ತು ತೆಲಂಗಾಣ ಹೋರಾಟ ಕೃತಿಗೆ ಕರ್ನಾಟಕ ...

READ MORE

Related Books