ಆನಂದಾಮೈಡ್

Author : ನಾಗೇಶ ಹೆಗಡೆ

Pages 164

₹ 160.00




Year of Publication: 2020
Published by: ಭೂಮಿ ಬುಕ್ಸ್
Address: # 150, ಮೊದಲ ಮುಖ್ಯರಸ್ತೆ, ಶೇಷಾದ್ರಿಪುರಂ, ಬೆಂಗಳೂರು-560020
Phone: 9449177628

Synopsys

ಪರಿಸರವಾದಿ ನಾಗೇಶ ಹೆಗಡೆ ಅವರು ವಿವಿಧ ವಿಷಯಗಳ ಕುರಿತು ಬರೆದ ಲೇಖನಗಳ ಸಂಗ್ರಹ ಕೃತಿ-ಆನಂದಾಮೈಡ್. ವಿಜ್ಞಾನ-ತಂತ್ರಜ್ಞಾನ ಸುದ್ದಿ ವಿಶ್ಲೇಷಣೆ ಎಂಬ ಉಪಶೀರ್ಷಿಕೆಯ ಈ ಕೃತಿಯಲ್ಲಿ ಒಟ್ಟು 35 ವಸ್ತು ವೈವಿಧ್ಯತೆಯ ಲೇಖನಗಳನ್ನು ಸಂಕಲಿಸಲಾಗಿದೆ. ದೈವತ್ವದ ಕಡೆ ದೈತ್ಯ ಹೆಜ್ಜೆ, ದೇಶದ ಖ್ಯಾತಿ ದೂಳುಪಾಲು, ನೀರಿಗಾಗಿ ಹಿಮಖಂಡಕ್ಕೆ ಹಗ್ಗ, ಕಲ್ಪಿತ ಕತೆಯನ್ನೂ ಮೀರುವ ಮಿದುಳು, ಊಹೆಗೂ ಮೀರುವ ವುಹಾನ್ ವ್ಯೂಹ, ಭೂದಿನದಂದು ಗೇಯಾ ಮಾತೆಯ ನೆನಪು, ಕಾಂಗ್ರೆಸ್ ಕಳೆಗೂ ಕೊರಾನಾಕ್ಕೂ ತಾಳಮೇಳ, ಒಂದು ಸುಂದರ ಕನಸಿನ ಕೊನೆ, ಕೋವಿಡ್ ಬದಿಗಿಟ್ಟು ಸಿವಿಡಿ ನೋಡೋಣವೆ?, ಭಯಬಿದ್ದಾಗ ಜ್ವರ ಏಕೆ ಬರುತ್ತದೆ?, ಭೂಮಿತಾಯಿ ಶರ್ಬತ್ ಮಾಡುತ್ತಿದ್ದಾಳೆ, ಮರೀಚಿಕೆಯೂ ಕಾಣದಷ್ಟು ಮಬ್ಬುಮಬ್ಬು, ಗೀತಾಂಜಲಿ ಎಂಬ ಬೆಳಕಿನ ಬಾಲೆ...ಹೀಗೆ ವಿವಿಧ ಲೇಖನಗಳಿವೆ. ಈ ಎಲ್ಲವೂ ಪ್ರಜಾವಾಣಿಯ ‘ವಿಜ್ಞಾನ ವಿಶೇಷ ಅಂಕಣ ಬರಹ’ಗಳಾಗಿವೆ. ಕಳೆದ ಎರಡು ವರ್ಷಗಳಲ್ಲಿ (2019-2020) j ಜಗತ್ತಿನ ಕೆಲವು ಪ್ರಮುಖ ವಿದ್ಯಮಾನಗಳನ್ನು ಕನ್ನಡದ ಕನ್ನಡಕದ ಮೂಲಕ ನೋಡಿ ವ್ಯಾಖ್ಯಾನಿಸಲು ಹಾಗೂ ಮಧ್ಯೆ ಮಧ್ಯೆ ಕೆಲವು ಲೇಖನಗಳು ತಮ್ಮ ಅಂಕಣ ಬರಹದ ವಿಸ್ತರಣೆಯ ರೂಪದಲ್ಲಿ ಫೇಸ್ ಬುಕ್ ನಲ್ಲಿ ಬಂದಿದ್ದು , ಅವುಗಳನ್ನು ಸಹ ಈ ಸಂಕಲನದಲ್ಲಿ ಸೇರಿಸಿದ್ದಾಗಿ ಲೇಖಕರು ಹೇಳಿದ್ದಾರೆ. ಮಾತ್ರವಲ್ಲ; ನಿಸರ್ಗವನ್ನು ಬಗ್ಗು ಬಡಿದು ನಾಳಿನ ಪೀಳಿಗೆಯ ಭವಿಷ್ಯಕ್ಕೂ ಬೆಂಕಿಯಿಟ್ಟು, ಇಂದಿನವರ ಚಿಲುಮೆ ಉರಿಯುತ್ತಿದೆ. ಈ ಸಂಕಲನದ ಬಹುತೇಕ ಎಲ್ಲ ಲೇಖನಗಳಲ್ಲೂ ಅದರ ಛಾಯೆ ಇದೆ. ಕೆಲವೆಡೆ ಢಾಳಾಗಿ, ಇನ್ನೂ ಕೆಲವೆಡೆ ಮುಗುಮ್ಮಾಗಿ ಅದು ಇದೆ’ ಎಂದೂ ತಮ್ಮ ಲೇಖನಗಳ ಸ್ವರೂಪವನ್ನು ಸ್ಪಷ್ಟಪಡಿಸಿದ್ದಾರೆ..

About the Author

ನಾಗೇಶ ಹೆಗಡೆ
(14 February 1948)

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...

READ MORE

Reviews

”ಆನಂದಾಮೈಡ್’ ಕೃತಿಯ ವಿಮರ್ಶೆ

 ವಿಜ್ಞಾನ-ತಂತ್ರಜ್ಞಾನ, ಪರಿಸರಕ್ಕೆ ಸಂಬಂಧಿಸಿದ ಜಾಗತಿಕ ವಿದ್ಯಮಾನಗಳನ್ನು ಕನ್ನಡದ ಓದುಗರಿಗೆ ತಲುಪಿಸುವ ಲೇಖಕರಲ್ಲಿ ಪ್ರಮುಖರಾದವರು ನಾಗೇಶ ಹೆಗಡೆಯವರು. 'ಆನಂದಮೈಡ್' ೨೦೧೯ ಮತ್ತು ೨೦೨೦ರಲ್ಲಿ ಪ್ರಜಾವಾಣಿಯಲ್ಲಿ ಬರೆದ ಒಟ್ಟು 35 ಲೇಖನಗಳ ಸಂಗ್ರಹ. “ಆನಂದಾಮೈಡ್' ಎಂಬ ಶೀರ್ಷಿಕೆಯ ಲೇಖನ ಮಾದಕವಸ್ತುಗಳ ಜಾಲದಲ್ಲಿ ಸಿನಿಮಾನಟಿಯರು ಸಿಲುಕಿಕೊಂಡಿರುವ ಸುದ್ದಿಗಳುಬಂದ ಸಂದರ್ಭದಲ್ಲಿ ಬರೆದಂತಹದು. ದೇಹಕ್ಕೆ ಅಗತ್ಯವಿದ್ದಾಗ ಸಂತಸವನ್ನು ಸುರಿಸಬಲ್ಲ ರಸ ಮಿದುಳಿನಲ್ಲೇ ಉತ್ಪತ್ತಿಯಾಗುತ್ತದೆ. ಇದಕ್ಕೆ ರಾಫೆಲ್ ಮೆಕ್ಕೊಲಮ್ ಎಂಬ ವಿಜ್ಞಾನಿ 'ಆನಂದಾಮೈಡ್' ಎಂದು ಹೆಸರಿಸಿದ ಎನ್ನುತ್ತಾರೆ.

ಹೆಚ್ಚಿನ ಲೇಖನಗಳೆಲ್ಲಾ ಕೋವಿಡ್‌ಗೆ ಸಂಬಂಧಿಸಿದವು ಮತ್ತು ವೈಜ್ಞಾನಿಕ ಆವಿಷ್ಕಾರಗಳ ಅಡ್ಡಪರಿಣಾಮಗಳ ಬಗ್ಗೆ ಎಚ್ಚರ ಮೂಡಿಸುವ ಲೇಖನಗಳಾಗಿವೆ. ಹಾಗೆಯೇ ಪರಿಸರ, ಜಲಸಂಪತ್ತು, -~ ಗ್ರಾಮೀಣ ಬದುಕಿನ ಕುರಿತ ಭರವಸೆ ಹುಟ್ಟಿಸುವ ಪ್ರಯತ್ನಗಳು ನಡೆದಿರುವ ಬಗ್ಗೆ ಲೇಖನಗಳನ್ನೂ ನೋಡಬಹುದು. ಮಹಾರಾಷ್ಟ್ರದ ಪೋಪಟ್ ರಾವ್ ಪವಾರ್, ಅಣ್ಣಾ ಹಜಾರೆ ಮತ್ತು ರಾಜೇಂದ್ರಸಿಂಗ್ ಮುಂತಾದವರ ಪ್ರಯತ್ನಗಳ ಬಗ್ಗೆ ಲ್ಲಿ ಮತ್ತು ಮಳೆಕೊಯ್ಲಿನ ಮಹತ್ವವನ್ನು “ವಾಟರ್ ಕಪ್ ಸ್ಪರ್ಧೆಯನ್ನು ಹಳ್ಳಿಹಳ್ಳಿಗಳಲ್ಲಿ - ನಡೆಸಿ ಅಂತರ್ಜಲ ಹೆಚ್ಚಿಸಲು ಕಾರಣರಾದ ಹಿಂದಿ ಚಲನಚಿತ್ರನಟ ಅಮೀರ್ ಖಾನ್ ಅವರ ಬಗ್ಗೆಯೂ ಬರೆದಿದ್ದಾರೆ.

ಅಮೇರಿಕಾದ ಸಂವಿಧಾನದಂತೆ, ಅಲ್ಲಿ ಸರ್ಕಾರ ಮತ್ತು ಚರ್ಚ್ ಪ್ರತ್ಯೇಕವಾಗಿಯೇ ಇವೆ. ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಬೈಬಲ್ ಓದಬಾರದೆಂದು ಮತ್ತು ಚಂದ್ರನ ಗೆ ಮೇಲೆ ಇಳಿಯಲು ಹೊರಟ ಗಗನಯಾತ್ರಿಗಳು ಅಲ್ಲಿ ಧಾರ್ಮಿಕ ಕ್ರಿಯೆಗಳನ್ನು - ನಡೆಸಬಾರದೆಂದು 1968-67 ರಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿ ಗೆದ್ದ ಮೆಡೆಲಿನ್ ಓ' ಹೇರ್ ಎಂಬ ಸ್ತ್ರೀವಾದಿ ಮಹಿಳೆ, ಆಕೆಯ ಮಗ ಮತ್ತು ಮೊಮ್ಮಗಳನ್ನು 1995ರಲ್ಲಿ ಬರ್ಬರವಾಗಿ ಹತ್ಯೆ ಮಾಡಿದ ದಾರುಣ ಸಂಗತಿ 'ಕಕ್ಷೆಯಲ್ಲಿ ದೇವರಥ ಮತ್ತು ಭಕ್ತಿರಸ ಎಂಬ ಲೇಖನದಲ್ಲಿದೆ. ವಿಜ್ಞಾನದಲ್ಲಿ ಏನು ಸಾಧಿಸಿದರೇನು? ಧರ್ಮದ ಹೆಸರಿನಲ್ಲಿ ಈ ಮನುಷ್ಯತ್ವವನ್ನು ಕಳೆದುಕೊಳ್ಳದಂತೆ ಮಾಡಲು ಏನೂ ಆವಿಷ್ಕಾರ ಮಾಡಿಲ್ಲವೇ ಎಂದು - ಕೇಳುವಂತಾಗುತ್ತದೆ.

ಮಿಡತೆ ದಾಳಿಯ ಬಗ್ಗೆ ಬರೆಯುತ್ತಾ ಆ ಮಿಡತೆಗಳನ್ನು ರಾತ್ರಿ ಹೊತ್ತು ಒಟ್ಟು ಮಾಡಿ ಹುಗಿದು ಸಾವಯವ ಗೊಬ್ಬರ ಮಾಡಬಹುದಾದ ಸಾಧ್ಯತೆಗಳ ಬಗ್ಗೆ ನಮ್ಮ 2 ಕೃಷಿವಿಜ್ಞಾನಿಗಳು ಯಾಕೆ ಸಲಹೆ ನೀಡುವುದಿಲ್ಲ? ಅವರು ಮತ್ತೆ ಕೀಟನಾಶಕಗಳನ್ನು ಸಿಂಪಡಿಸಿ ಭೂಮಿಗೆ ವಿಷ ಉಣ್ಣಿಸುವಂತಹ ಕ್ರಮಗಳ ಸರಳ ಜೀವನದ ಮಾದರಿಯೇ ಪರಿಹಾರ ಎಂಬ ಬಗ್ಗೆ ಚರ್ಚಿಸಿದ್ದಾರೆ. ಕಾರ್ಬನ್ ಕರುವವರ ಇಂಧನಗಳ ಬಳಕೆಗಿಂತ ಸೌರಶಕ್ತಿ, ಗಾಳಿಶಕ್ತಿ, ಗೊಬ್ಬರ ಅನಿಲದಂತಹ ಸುಸ್ಥಿರ ಅಭಿವೃದ್ಧಿಗೆ ದಾರಿ ಮಾಡುವ ಬದಲೀ ಇಂಧನಗಳನ್ನು ಬಳಸುವ ತಂತ್ರಜ್ಞಾನದ ಬಗ್ಗೆ ಗಮನ ಸೆಳೆಯುತ್ತಾರೆ. ಪರಿಸರ ಹೋರಾಟಗಾರ್ತಿ ಗ್ರೇತಾ ಥನ್‌ಬರ್ಗಳ ಹೋರಾಟ ಬೆಂಬಲಿಸಿ ಕೆಲವರು ಜೀರೋ ಕಾರ್ಬನ್ ಬದುಕಿಗೆ ಹೊಂದಿಕೊಳ್ಳುತ್ತಿದ್ದಾರೆ.

ನಮ್ಮ ನಾಯಕರು ಗಾಂಧೀಜಿಯವರಂತೆ ಸರಳಜೀವನವನ್ನು ನಡೆಸಿ ಎಳೆಯರಿಗೆ ಮಾದರಿಯಾದರೆ ಇದು ಸಾಧ್ಯ ಎಂಬ ಬಗ್ಗೆ ಚರ್ಚಿಸಿದ್ದಾರೆ. ನಮ್ಮ ಪ್ರಧಾನಿಯವರು ಸೌರಶಕ್ತಿಯನ್ನು ಹಾಡಿಹೊಗಳಿ ಎಲ್ಲಾ ಆಸಕ್ತ ರಾಷ್ಟ್ರಗಳನ್ನೂ ಸೇರಿಸಿ 'ಅಂತಾರಾಷ್ಟ್ರೀಯ ಸೋಲಾರ್ ಅಲೆಯನ್' ಎಂಬ ಸಂಘಟನೆಯನ್ನು ಹುಟ್ಟುಹಾಕಿದವರು. ಆದರೆ ಕೊರೋನಾ ಅವಧಿಯಲ್ಲಿ ಬಹುಕೋಟಿ ಕಂಪನಿಗೆ ಕಲ್ಲಿದ್ದಲು ಗಣಿಗಳನ್ನು ಆರಂಭಿಸಲು ಅನುಮತಿ ನೀಡಿದ್ದಾರೆ. “ಶಕ್ತಿತಜ್ಞರಿಗೆ ಶಾಕ್ ಕೊಟ್ಟಿದ್ದಾರೆ. ಶಾಖ ಹೆಚ್ಚಾಗಿ ಬಳಲುತ್ತಿರುವ ಭೂಮಿಗೆ ಮತ್ತಷ್ಟು ಶಾಖ ಕೊಡುವಂತೆ ಮಾಡಿದ್ದಾರೆ” ಎಂದು ಮಾರ್ಮಿಕವಾಗಿ ಹೇಳುತ್ತಾರೆ. ಜಗತ್ತಿನಾದ್ಯಂತ ವಿಜ್ಞಾನ-ತಂತ್ರಜ್ಞಾನವನ್ನು ಲಾಭಕೋರ ಕಂಪೆನಿಗಳು, ರಾಜಕೀಯ ಶಕ್ತಿಗಳು ಒಂದಾಗಿ ನೈತಿಕ ಪ್ರಶ್ನೆಗಳನ್ನು ಕಡೆಗಣಿಸಿ ಬಳಸಿರುವುದನ್ನು ಈ ಲೇಖನಗಳಲ್ಲಿ ನೋಡಬಹುದು. ಈ ಲೇಖನಗಳು ಪ್ರತ್ಯೇಕ ಲೇಖನಗಳೆಂದು ಅನಿಸದೇ ಒಂದೇ ದಾರದಲ್ಲಿ ಪೋಣಿಸಿದಂತಿದ್ದು ವಿಜ್ಞಾನ, ತಂತ್ರಜ್ಞಾನ, ಪರಿಸರದ ಮೇಲಿನ ವಿದ್ಯಮಾನಗಳ ಕುರಿತು ಬೆಳಕು ಚೆಲ್ಲಿ ನಮ್ಮನ್ನು ಆಲೋಚನೆಗೆ ಹಚ್ಚುತ್ತವೆ. ವೈಜ್ಞಾನಿಕ ಕ್ಷೇತ್ರದಲ್ಲಿ ಮಾಡಿರುವ ಅದ್ಭುತವಾದ ಆವಿಷ್ಕಾರಗಳಿಂದ ಜೀವನಮಟ್ಟ ಸುಧಾರಣೆಯಾಗಿ ಸುಖ ಅನುಭವಿಸುತ್ತೇವೆಂದು ಅಂದುಕೊಂಡಿದ್ದೇವೆ. ಆದರೆ ಆ ರೀತಿಯ ಸುಖಕ್ಕೆ ನಾವು ತರುತ್ತಿರುವ ಬೆಲೆ ಹವಾಮಾನ ವೈಪರೀತ್ಯ, ಪರಿಸರ ಮಾಲಿನ್ಯದ ರೂಪದಲ್ಲಿ ನಮ್ಮನ್ನು ಸಂಕಷ್ಟಕ್ಕೀಡುಮಾಡಿದೆಯೆಂಬ ಸಂಗತಿಗಳನ್ನು ಮತ್ತು ಜೈವಿಕ ತಂತ್ರಜ್ಞಾನ ಮತ್ತು ರೋಬಾಟಿಕ್ ತಂತ್ರಜ್ಞಾನಗಳಲ್ಲಿ ಮಾಡಿದ ಪ್ರಯೋಗಗಳ ಬಗ್ಗೆ ಬೆಚ್ಚಿ ಬೀಳಿಸುವಂತಹ ಸಂಗತಿಗಳನ್ನು ಲೇಖಕರು ಇಲ್ಲಿ ಚುರುಕಾದ ವಿಡಂಬನೆ ಮತ್ತು ದಟ್ಟ ವಿಷಾದಗಳ ವಿಶಿಷ್ಟ ಮಿಶ್ರಣದ ಪರಿಣಾಮಕಾರಿ ಶೈಲಿಯಲ್ಲಿ ನಿರೂಪಿಸಿದ್ದಾರೆ.

(ಕೃಪೆ: ಹೊಸಮನುಷ್ಯ, ಬರಹ: ಕೆ.ಪದ್ಮಾಕ್ಷಿ)

Related Books