ಆನೆ ಡಾಕ್ಟ್ರ ಆತ್ಮಕಥೆ

Author : ಕಟ್ಟೆ ಗುರುರಾಜ್

Pages 172

₹ 120.00




Year of Publication: 2016
Published by: ಚಿನ್ಮಯ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಕಟ್ಟೆ ಗುರುರಾಜ್ ಅವರ ಕೃತಿ-ಆನೆ ಡಾಕ್ಟ್ರ ಆತ್ಮಕಥೆ. ಆನೆಗಳ ಮಧ್ಯೆ ಸುತ್ತಾಡಿ ಅವುಗಳ ಜೀವನ ಶೈಲಿಯನ್ನು, ರೋಚಕ ಅನುಭವಗಳನ್ನು ಕಟ್ಟಿಕೊಡುವ ಕೃತಿ. ಆನೆಡಾಕ್ಟ್ರು ಚೆನ್ನಿಯಪ್ಪ ಎಂಬುವರಿಂದ ಕಾಡಿನ ಹಾಗೂ ಆನೆಗಳ ವರ್ತನೆಗಳ ಕುರಿತು ಮಾಹಿತಿ ಪಡೆದ ಲೇಖಕರು ತಮ್ಮದೇ ಅನುಭವಗಳನ್ನು ದಾಖಲಿಸಿದ್ದು ಈ ಕೃತಿಯ ವೈಶಿಷ್ಟ್ಯ. ಕಾಡಿನಲ್ಲಿ ಮುಕ್ತವಾಗಿ ತಿರುಗುವ ಆನೆಗಳಿಗೂ, ಸಾಕಿದ ಆನೆಗಳಿಗೂ ವ್ಯತ್ಯಾಸವಿದೆ. ಅವುಗಳ ವರ್ತನೆ-ವಿಚಾರ ಮಧ್ಯೆಯೂ ಸಾಕಷ್ಟು ಅಂತರವಿದೆ. ಈ ಪ್ರಾಣಿಯ ಮನೋಸ್ಥಿತಿಯನ್ನು ಅರಿಯದೇ ಹೋದರೆ ಮಾವುತರಿಗೂ ಆನೆಗಳು ಮಣಿಯವು. ಒಟ್ಟಿನಲ್ಲಿ, ಆನೆಗಳ ಮನೋವಿಜ್ಞಾನವನ್ನು ಸ್ವಲ್ಪಮಟ್ಟಿಗಾದರೂ ತಿಳಿಯಲು ಈ ಕೃತಿಯು ಸಾಹಿತ್ಯಕವಾಗಿ ಉಪಯುಕ್ತ.

About the Author

ಕಟ್ಟೆ ಗುರುರಾಜ್
(06 October 1977)

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರದವರಾದ ಕಟ್ಟೆ ಗುರುರಾಜ್‌ ವೃತ್ತಿಯಲ್ಲಿ ಪತ್ರಕರ್ತರು.  ತಂದೆ - ಕೆ.ರಾಮಚಂದ್ರರಾವ್, ತಾಯಿ ಸಾವಿತ್ರಮ್ಮ. ಊರಲ್ಲೇ ಪ್ರಾಥಮಿಕ ಶಿಕ್ಷಣ ಹಾಗೂ ಪದವಿ ಶಿಕ್ಷಣ ಪಡೆದ ಇವರು, ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಮೈಸೂರು ವಿವಿ, ಸ್ನಾತಕೋತ್ತರ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ.  ಪತ್ರಿಕೋದ್ಯಮ ವೃತ್ತಿ ಸೇರಿದ ಮೇಲೆ ಸಂಗೀತ, ಓದು, ಬರಹ, ಚಿತ್ರಕಲೆ, ಸಿನಿಮಾ, ಸುತ್ತಾಟ ಇವರ ಪ್ರವೃತ್ತಿ. ಕಳೆದ 16 ವರ್ಷಗಳಲ್ಲಿ ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಕನ್ನಡಪ್ರಭದಲ್ಲಿ ಕಾರ್ಯನಿರ್ವಹಿಸಿರುವ ಇವರು ಪ್ರಸ್ತುತ ಉದಯವಾಣಿಯಲ್ಲಿ ಹಿರಿಯ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. 'ಕರಗುತಿರುವ ಹಿಮಾಲಯದ ನೀರ್ಗಲ್ಲುಗಳು' ಬರಹಕ್ಕೆ 2008ರ ‘ಚರಕ ಪ್ರಶಸ್ತಿ’ ...

READ MORE

Related Books