ಆಪೋಶನ

Author : ಕಟ್ಟೆ ಗುರುರಾಜ್

Pages 136

₹ 100.00




Year of Publication: 2017
Published by: ವಸಂತ ಪ್ರಕಾಶನ
Address: 3ನೇ ಬ್ಲಾಕ್ ಜಯನಗರ, ಬೆಂಗಳೂರು

Synopsys

ಬಯಲು ಸೀಮೆ ಜನರಿಗೆ ನೀರಿನ ಬೆಲೆ ಚೆನ್ನಾಗಿ ಗೊತ್ತು. ಸಲೀಸಾಗಿ ನಲ್ಲಿ ನೀರು ಬರುವ ಜನರಿಗೆ ನೀರಿನ ಮಹತ್ವ ತಳಿದಿಲ್ಲ. ಬೆಂಗಳೂರು ಸಮೀಪದ ಕೆಲವು ಊರುಗಳಿಗೆ 15 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತದೆ. ನೀರಿಗಾಗಿ ಹೊಡೆದಾಟ, ಮನಸ್ತಾಪ ನಡೆಯತ್ತವೆ. ಮದುವೆಗಳು ಮುರಿದುಬಿದ್ದಿವೆ. ರಾಜಕೀಯದ ಬೇಳೆ ಬೇಯುತ್ತದೆ. ರಾಜ್ಯಗಳ ನಡುವೆ ದೇಶಗಳ ನಡುವೆ ತಕರಾರುಗಳು ನಡೆಯತ್ತವೆ. ಜನರಲ್ಲಿ ಜಲಜಾಗೃತಿ ಆರಿವು ಮೂಡಬೇಕು. ಕಟ್ಟೆ ಗುರುರಾಜ್ ಅವರ 'ಆಪೋಶನ' ಪುಸ್ತಕವನ್ನು ಕಾದಂಬರಿಯೆಂದೊ, ಕಥೆಗಳೆಂದೊ, ವ್ಯಥೆಗಳೆಂದೋ ಇಲ್ಲವೇ ಸುಲಲಿತ ಪ್ರಬಂಧಗಳೆಂದು ಹೇಗೆ ಬೇಕಾದರೂ ಗುರ್ತಿಸಬಹುದು. ಬರವಣಿಗೆಯ ಶೈಲಿ ಉತ್ತಮವಾಗಿದೆ, ಸ್ವಲ್ಪ ಭಿನ್ನವಾಗಿ ಮತ್ತು ಆಪ್ತವಾಗಿ ನೀರಿನ ಬಗ್ಗೆ ವಿವರಿಸಿದ್ದಾರೆ .

About the Author

ಕಟ್ಟೆ ಗುರುರಾಜ್
(06 October 1977)

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರದವರಾದ ಕಟ್ಟೆ ಗುರುರಾಜ್‌ ವೃತ್ತಿಯಲ್ಲಿ ಪತ್ರಕರ್ತರು.  ತಂದೆ - ಕೆ.ರಾಮಚಂದ್ರರಾವ್, ತಾಯಿ ಸಾವಿತ್ರಮ್ಮ. ಊರಲ್ಲೇ ಪ್ರಾಥಮಿಕ ಶಿಕ್ಷಣ ಹಾಗೂ ಪದವಿ ಶಿಕ್ಷಣ ಪಡೆದ ಇವರು, ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಮೈಸೂರು ವಿವಿ, ಸ್ನಾತಕೋತ್ತರ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ.  ಪತ್ರಿಕೋದ್ಯಮ ವೃತ್ತಿ ಸೇರಿದ ಮೇಲೆ ಸಂಗೀತ, ಓದು, ಬರಹ, ಚಿತ್ರಕಲೆ, ಸಿನಿಮಾ, ಸುತ್ತಾಟ ಇವರ ಪ್ರವೃತ್ತಿ. ಕಳೆದ 16 ವರ್ಷಗಳಲ್ಲಿ ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಕನ್ನಡಪ್ರಭದಲ್ಲಿ ಕಾರ್ಯನಿರ್ವಹಿಸಿರುವ ಇವರು ಪ್ರಸ್ತುತ ಉದಯವಾಣಿಯಲ್ಲಿ ಹಿರಿಯ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. 'ಕರಗುತಿರುವ ಹಿಮಾಲಯದ ನೀರ್ಗಲ್ಲುಗಳು' ಬರಹಕ್ಕೆ 2008ರ ‘ಚರಕ ಪ್ರಶಸ್ತಿ’ ...

READ MORE

Related Books