ಆಪ್ತಗೀತೆ

Author : ಎಚ್. ಎಸ್. ವೆಂಕಟೇಶಮೂರ್ತಿ

Pages 220

₹ 275.00




Year of Publication: 2018
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಕವಿ, ವಿಮರ್ಶಕರಾದ ಎಚ್.ಎಸ್. ವೆಂಕಟೇಶಮೂರ್ತಿ ಅವರ 'ಆಪ್ತಗೀತೆ'ಯು ಭಗವದ್ಗೀತೆಯ ಸರಳ ಕಾವ್ಯಾನುವಾದ. ಭಗವದ್ಗೀತೆಯನ್ನು ಓದಿಕೊಳ್ಳುವ, ಅರ್ಥೈಸಿಕೊಳ್ಳುವ ,ಗ್ರಹಿಸುವ ಪರಿಯನ್ನು ತಮ್ಮ ಕಾವ್ಯಾನುವಾದದ ಮೂಲಕ ’ಆಪ್ತಗೀತೆ’ಯಲ್ಲಿ ಓದುಗರನ್ನು ಕಾವ್ಯ ಲೋಕಕ್ಕೆ ಪರಿಚಯಿಸಿದ್ದಾರೆ.ಸರಳ ಹಾಗೂ ಕಥನ ಗುಣದಿಂದ ಓದುಗರಿಗೆ ಈ ಕೃತಿ ಹತ್ತಿರವಾಗುತ್ತದೆ,ಭಗವದ್ಗೀತೆಯ ಪ್ರತಿ ಶ್ಲೋಕಕ್ಕೆ ನಾಲ್ಕು ಸಾಲುಗಳುಳ್ಳ ಚೌಪದಿ ರಚನೆಯನ್ನು ಕವಿ ಮಾಡಿದ್ದಾರೆ. ಭಗವದ್ಗೀತೆಯಲ್ಲಿನ 'ಸಂಜಯ ಉವಾಚ', 'ಅರ್ಜುನ ಉವಾಚ’ದಂತಹ ಸೂಚನೆ ಕೈಬಿಟ್ಟು ಖಂಡಕಾವ್ಯದ ರೀತಿಯಲ್ಲಿ ಕಾವ್ಯಾನುಸಂಧಾನದ ಅನುವಾದ ರಚನೆಯನ್ನು ಮಾಡಿದ್ಧಾರೆ.

ಓದುಗರನ್ನು ಸರಾಗವಾಗಿ ಓದಿಸಿಕೊಳ್ಳುವ ಕಾವ್ಯಗುಣವನ್ನು ಈ ಕೃತಿ ಓದುಗರಲ್ಲಿ ಬೆಳೆಸುತ್ತದೆ. ಸಮಾಜದ ಅಗತ್ಯವಾದ, ಜೀವನದ ಅನೇಕ ತತ್ವ, ಬೋಧನೆ, ಮರ್ಮಗಳನ್ನು ಭಗವದ್ಗೀತೆ ಬೋಧಿಸುತ್ತದೆ, ಅಂತೆಯೇ ಕವಿ ಎಚ್.ಎಸ್. ವೆಂಕಟೇಶ್ ಮೂರ್ತಿಯವರ ಈ ಕಾವ್ಯಾನುವಾದ ರಚನೆ ಕಾವ್ಯಾತ್ಮಕವಾಗಿ ಗೀತೆ ಹತ್ತಿರವಾಗುವಂತೆ ಮನಕ್ಕಿಳಿಯುತ್ತದೆ. ಜ್ಞಾನ, ಕರ್ಮ, ಭಕ್ತಿ ಯೋಗಗಳನ್ನು ಶ್ರೀ ಕೃಷ್ಣ ಹಂತಹಂತವಾಗಿ ಬೋಧಿಸಿರುವ ಮೌಲ್ಯಯುತ ತತ್ವವನ್ನು ಸರಾಗವಾಗಿಯೇ ’ಆಪ್ತಗೀತೆ’ ತಿಳಿಸುತ್ತದೆ.

 

 

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Conversation

Related Books