ಆರೋಗ್ಯ ಚಿಂತನ

Author : ಜಿ.ಕೆ. ಕುಲಕರ್ಣಿ

Pages 150

₹ 100.00




Year of Publication: 2017
Published by: ನೆಮ್ಮದಿ ಪ್ರಕಾಶನ
Address: # 19/1, ಪಾರ್ಕ ರಸ್ತೆ, ಎಸ್.ಎಸ್. ಪುರಂ, ತುಮಕೂರು-2.
Phone: 08162275699

Synopsys

ಲೇಖಕ ಜಿ.ಕೆ. ಕುಲಕರ್ಣಿ ಅವರು ಆರೋಗ್ಯ ಮಹತ್ವ ಕುರಿತು ಬರೆದ ಬರಹಗಳ ಸಂಕಲನವಿದು-ಆರೋಗ್ಯ ಚಿಂತನ. ಎಲ್ಲ ಸಂಪತ್ತಿಗಿಂತಲೂ ಆರೋಗ್ಯ ಸಂಪತ್ತೇ ಹೆಚ್ಚಿನದು. ಆರೋಗ್ಯ ಇಲ್ಲದಿರೆ ಏನೆಲ್ಲ ಸಂಪತ್ತು ಇದ್ದರೂ ವ್ಯರ್ಥ. ಆರೋಗ್ಯವಿದ್ದರೆ ಮಾತ್ರ ಜೀವನದಲ್ಲಿ ನೆಮ್ಮದಿ ಲಭಿಸುತ್ತದೆ. ತಪ್ಪಿದರೆ, ಜೀವನ ಅಂತಿಮ ಗುರಿ ಎನ್ನಬಹುದಾದ ನೆಮ್ಮದಿಯೇ ಇಲ್ಲವಾಗಿ ಆರೋಗ್ಯ ಹೊರತುಪಡಿಸಿ ಉಳಿದೆಲ್ಲ ಸಂಪತ್ತು ತಿರಸ್ಕಾರ ಯೋಗ್ಯವಾಗುತ್ತದೆ. ಇಂತಹ ವಿಚಾರಗಳನ್ನು ಒಳಗೊಂಡ ಕೃತಿ ಇದು.

About the Author

ಜಿ.ಕೆ. ಕುಲಕರ್ಣಿ
(01 March 1953)

ಹಿರಿಯ ಲೇಖಕ ಜಿ.ಕೆ. ಕುಲಕರ್ಣಿ ಅವರು ವಿಜಯಪುರ  ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದವರು. ತುಮಕೂರು ಜಿಲ್ಲಾ ಆರೋಗ್ಯ  ತರಬೇತಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾಗಿ ನಿವೃತ್ತರು. ಸದ್ಯ ತುಮಕೂರಿನಲ್ಲಿ ವಾಸವಿದ್ದಾರೆ. ಎಚ್ ಐವಿ, ಏಡ್ಸ್ ಸೇರಿದಂತೆ ಸಾಂಕ್ರಾಮಿಕ ರೋಗಗಳ ಕುರಿತು ಜನಜಾಗೃತಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಧಾರವಾಡ, ಹೊಸಪೇಟೆ ಸೇರಿದಂತೆ ರಾಜ್ಯದ ವಿವಿಧ ಆಕಾಶವಾಣಿ ಕೇಂದ್ರಗಳಿಂದ ಇವರ ಕವನ-ಬರಹಗಳು ಪ್ರಸಾರಗೊಂಡಿವೆ.  ಕತ್ತಲೆ ಕರಗಿತು ಎಂಬ ರೇಡಿಯೋ ನಾಟಕವು ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ ಪ್ರಸಾರಗೊಂಡಿದೆ. ನಗೆ ಮಲ್ಲಿಗೆ, ಹಾಸ್ಯಸಿಂಚನ ಹಾಗೂ ಹಾಸ್ಯಲೋಕ ಹೀಗೆ ವಿವಿಧ ವೇದಿಕೆಗಳಲ್ಲಿ ಹಾಸ್ಯ ಕಾರ್ಯಕ್ರಮ ನೀಡಿದ್ದಾರೆ. ಅಧ್ಯಾತ್ಮಿಕ ಉಪನ್ಯಾಸ, ಜೀವನ ...

READ MORE

Related Books