ಆರೋಗ್ಯ ಸುಖ-ಸಂತೋಷಕ್ಕೆ ಅಡಿಪಾಯ

Author : ಪಿ.ಎಸ್. ಶಂಕರ್



Year of Publication: 2022
Published by: ಸಾಹಿತ್ಯ ಪ್ರಕಾಶನ
Address: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್‍ ರಸ್ತೆ, ನ್ಯು ಹುಬ್ಬಳ್ಳಿ, ಹುಬ್ಬಳ್ಳಿ-580020.
Phone: 094481 10034

Synopsys

ನಮ್ಮ ಮಾನಸಿಕ, ಸಾಮಾಜಿಕ ಸ್ಥಿತಿಗತಿಗಳು, ಬದಲಾದ ಜೀವನ ಶೈಲಿ, ಉದ್ಯೋಗ, ಒತ್ತಡಗಳು ಎಲ್ಲವೂ ಒಟ್ಟಾಗಿ ನಮ್ಮ ಆರೋಗ್ಯದ ಮೇಲೆ ಉಂಟು ಮಾಡುವ ಪರಿಣಾಮಗಳನ್ನು ಆಪ್ತ ಸಮಾಲೋಚನೆಯ ರೀತಿಯಲ್ಲಿ ತಿಳಿಸಿಕೊಡುವ ಕೃತಿ ಲೇಖಕ ಪಿ.ಎಸ್.ಶಂಕರ್ ಅವರ ‘ಆರೋಗ್ಯ ಸುಖ-ಸಂತೋಷಕ್ಕೆ ಅಡಿಪಾಯ’ ಕೃತಿ. ಕೃತಿಯು 35 ಅಧ್ಯಾಯಗಳನ್ನು ಒಳಗೊಂಡಿದೆ. ಮನುಷ್ಯನ ಬದುಕಿನ ವಿವಿಧ ಮಜಲುಗಳಲ್ಲಿ ಎದುರಾಗುವ ಸನ್ನಿವೇಶಗಳು, ಅವುಗಳನ್ನು ಅವಕಾಶಗಳನ್ನಾಗಿಸುವ ಪರಿ, ಜೀವನೋತ್ಸಾಹ, ಹಾಸ್ಯ ಪ್ರಜ್ಞೆ ಸೇರಿದಂತೆ ಹಲವಾರು ವಿಚಾರಗಳ ಮಾಹಿತಿಯನ್ನು ಇಲ್ಲಿ ಕಾಣಬಹುದು. ಆರೋಗ್ಯದ ಚಿಂತನೆಯೆಂದರೆ ಕೇವಲ ದೇಹ ರಚನೆ ಮತ್ತು ಅದರ ಕಾರ್ಯಗಳಷ್ಟೇ ಅಲ್ಲ. ಅದರಾಚೆಗಿನ ವಿಸ್ತಾರವನ್ನೂ ಹೊಂದಿದೆ ಎಂಬುದನ್ನು ಇಲ್ಲಿನ ಬರಹಗಳಲ್ಲಿ ಕಾಣಬಹುದು.ಇನ್ನು ಕೇವಲ ಆರೋಗ್ಯದ ಸಲಹೆಯನ್ನು ನೀಡುವುದಷ್ಟೇ ಅಲ್ಲ, ನಮ್ಮ ವರ್ತನೆ, ಆಲೋಚನಾ ಕ್ರಮಗಳ ಮೇಲೂ ಬೆಳಕು ಚೆಲ್ಲವುದನ್ನು ಇಲ್ಲಿನ ಬರಹಗಳಲ್ಲಿ ಕಾಣಬಹುದು. ಸಕಾರಾತ್ಮಕ ಆಲೋಚನೆಗಳೊಂದಿಗೆ ವೈದ್ಯ ವೃತ್ತಿಯ ನೈತಿಕ ಮೌಲ್ಯಗಳನ್ನೂ ಚರ್ಚಿಸಿದೆ. ಜೀವನ ಮೌಲ್ಯಗಳ ಬಗ್ಗೆಯೂ ತಿಳಿಸುತ್ತಾ, ವ್ಯಕ್ತಿತ್ವ ವಿಕಸನದ ಅಂಶಗಳನ್ನೂ ಒಳಗೊಂಡಿದೆ.

About the Author

ಪಿ.ಎಸ್. ಶಂಕರ್
(01 January 1936)

ವೃತ್ತಿಯಲ್ಲಿ ವೈದ್ಯರಾಗಿ ವೈದ್ಯ ಸಾಹಿತಿಯಾಗಿ ಪ್ರಸಿದ್ಧರಾಗಿರುವ ಡಾ.ಪಿ.ಎಸ್.ಶಂಕರ್ ಅವರು 1936 ಜನವರಿ 1ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹಲಗೇರಿಯಲ್ಲಿ ಜನಿಸಿದರು. ಹುಟ್ಟೂರು ಹಾಗೂ ಚಿತ್ರದುರ್ಗದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರು ಮತ್ತು ದೆಹಲಿಯಲ್ಲಿ ವೈದ್ಯಕೀಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಲಬುರ್ಗಿಯ ಎಂ.ಆರ್‌. ಮೆಡಿಕಲ್‌ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.  ವೃದ್ಧಾಪ್ಯದಲ್ಲಿನ ಕಾಯಿಲೆಗಳು, ಹೃದಯ ಜೋಪಾನ, ಕ್ಯಾನ್ಸರ್, ಹೃದಯ ರೋಗ ತಡೆಗಟ್ಟಿ, ಡಾ. ವಿಕ್ರಂ ಸಾರಾಭಾಯ್‌, ಮುಂತಾದ ಕೃತಿಗಳನ್ನು ರಚಿಸಿದ್ದಾರೆ.  ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ರಾಕ್ ಫೆಲ್ಲರ್ ಸ್ಕಾಲರ್ ಇನ್ ರೆಸಿಡೆನ್ಸ ಗೌರವ, ಭಾರತ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆಯ ...

READ MORE

Related Books