ಆರ್ಯಭಟೀಯಮ್

Author : ಎಸ್. ಬಾಲಚಂದ್ರರಾವ್

Pages 168

₹ 131.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ವಿಶ್ವವಿಖ್ಯಾತ ಖಗೋಳ-ಗಣಿತ ವಿಜ್ಞಾನಿ ಆರ್ಯಭಟನು ಬರೆದ ‘ಆರ್ಯಭಟೀಯಮ್’ ಕೃತಿಯು ಮೂಲ ಸಂಸ್ಕೃತದಲ್ಲಿದೆ. ಅದನ್ನು ಎಸ್. ಬಾಲಚಂದ್ರರಾವ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತದ ಗಣಿತ-ಖಗೋಲ ವಿಜ್ಞಾನವನ್ನು ಮೊದಲ ಬಾರಿ ವ್ಯವಸ್ಥಿತವಾಗಿ ಅಧ್ಯಯನ ಮಾಡಿದವರು ಆರ್ಯಭಟರು. ಖಗೋಳ ಶಾಸ್ತ್ರಕ್ಕೆ ಈತನ ವೈಜ್ಞಾನಿಕ ವಿಚಾರವೇ ಬುನಾದಿಯಾಗಿದ್ದು, ಕ್ರಿ.ಶ. 475ರಲ್ಲಿ ಜೀವಿಸಿದ್ದನು. ಚಂದ್ರಗುಪ್ತ ವಿಕ್ರಮಾದಿತ್ಯನ ಆಸ್ಥಾನದ ಪಂಡಿತರಾಗಿದ್ದರು. ಗಣಿತ, ಬೀಜಗಣಿತ, ತ್ರಿಕೋನಮಿತಿ ಹೀಗೆ ಗಣಿತದ ವಿವಿಧ ಪ್ರಕಾರಗಳಲ್ಲಿ ಮಂಡಿಸಿದ ವಿಚಾರ ಹಾಗೂ ಸೂತ್ರಗಳು ಇಂದಿಗೂ ತಮ್ಮ ಮೌಲಿಕತೆಯನ್ನು ಕಳೆದುಕೊಂಡಿಲ್ಲ. ಈತನ ಬಗ್ಗೆ ವಿವರಣೆ ಹಾಗೂ ಆತನ ಗಣಿತ ಹಾಗೂ ಖಗೋಲ ವಿಜ್ಞಾನ ಕುರಿತು ಇರುವ ವಿಶಾಲ ಹಾಗೂ ಅಗಾಧ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ.

About the Author

ಎಸ್. ಬಾಲಚಂದ್ರರಾವ್

ಎಸ್.ಬಾಲಚಂದ್ರ ರಾವ್ ಅವರು ಬೆಂಗಳೂರು ಭಾರತೀಯ ವಿದ್ಯಾಭವನದ ಗಾಂಧೀ ಸೆಂಟರ್ ಅಫ್ ಸೈನ್ಸ್ ಅಂಡ್ ಹ್ಯೂಮನ್ ವ್ಯಾಲ್ಯೂಸ್ ವಿಭಾಗದ ಗೌರವ ನಿರ್ದೇಶಕರೂ ಹಾಗೂ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯಲ್ಲಿ ಗೌರವ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ.  ಆರ್ಯಭಟ, ಗಣಿತಶಾಸ್ತ್ರದ ಪ್ರವರ್ತಕರು ಮತ್ತು ಸ್ವಾರಸ್ಯಗಳು, ಭಾರತೀಯ ಖಗೋಳಶಾಸ್ತ್ರ, ಶ್ರೀನಿವಾಸ ರಾಮಾನುಜನ್, ವೇದಾಂಗ ಜ್ಯೋತಿಷ, ಭಾರತೀಯ ಖಗೋಳವಿಜ್ಞಾನದಲ್ಲಿ ಗ್ರಹಣಗಳು ಮುಂತಾದ ಕೃತಿಗಳು.  ...

READ MORE

Related Books