ಆಸ್ಪತ್ರೆಗಳಲ್ಲಿ ಏಳು ಎಚ್ಚರಿಕೆಗಳು

Author : ನಾಗೇಶ ಹೆಗಡೆ

Pages 128

₹ 100.00




Year of Publication: 2016
Published by: ಭೂಮಿ ಬುಕ್ಸ್
Address: # ಮಳಿಗೆ ಸಂಖ್ಯೆ 150, 1ನೇ ಮೇನ್, 2ನೇ ಮುಖ್ದರಸ್ತೆ, ಶ್ರೀರಾಮಪುರ, ಶೇಷಾದ್ರಿಪುರಂ, ಬೆಂಗಳೂರು-560020.
Phone: 0802356 5885

Synopsys

ಖ್ಯಾತ ಪರಿಸರವಾದಿ ನಾಗೇಶ ಹೆಗಡೆ ಅವರು ಆಸ್ಪತ್ರೆಗಳ ಆನಾರೋಗ್ಯ ಕುರಿತೇ ಬರೆದ ಕೃತಿ-ಆಸ್ಪತ್ರೆಗಳಲ್ಲಿ ಏಳು ಎಚ್ಚರಿಕೆಗಳು. ವೈದ್ಯರು ರಜೆ ಮೇಲೆ ತೆರಳುವ ಆತುರದಲ್ಲಿದ್ದು, ಶುಕ್ರವಾರ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಡಿ, ಅನಗತ್ಯ ರಕ್ತಪೂರಣಕ್ಕೆ ಒಪ್ಪಬೇಡಿ, ಒಣ ರೇಜರ್ ಬಳಸಲು ಬಿಡಬೇಡಿ, ಏನೇನು ಕಾಯಿಲೆ ಇರದಿದ್ದರೂ ಆಗಾಗ ಹೆಲ್ತ್ ಚೆಕಪ್ ಮಾಡಿಸಿಕೊಳ್ಳದಿರಿ, ಸಾವಿನಂಚಿನಲ್ಲಿ ಕೃತಕ ಉಸಿರಾಟಕ್ಕೆ ಒಪ್ಪಬೇಡಿ, ಹಳೆ ಸಾಧನಗಳ ಜೊತೆಗೆ ಹೊಸತು ಹಾಕಿಸಿಕೊಳ್ಳಬೇಡಿ, ಡಾಕ್ಟರ್ ತಮ್ಮ ಕೈ ತೊಳೆದಿದ್ದಾರೆಯೇ ನೋಡಿ....ಇಂತಹ ಏಳು ಅಂಶಗಳತ್ತ ಸಾರ್ವಜನಿಕರನ್ನು ಎಚ್ಚರಿಸುವ ಬರಹಗಳು ಈ ಕೃತಿಯಲ್ಲಿ ಒಳಗೊಂಡಿವೆ.

About the Author

ನಾಗೇಶ ಹೆಗಡೆ
(14 February 1948)

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...

READ MORE

Related Books