ಆತ್ಮ ಧ್ಯಾನದ ಬುತ್ತಿ

Author : ನಾಗೇಶ್ ಜೆ. ನಾಯಕ

Pages 88

₹ 100.00




Year of Publication: 2021
Published by: ಸಮೀರ್ ಪ್ರಕಾಶನ
Address: ಕನಕಗಿರಿ

Synopsys

ನಾಗೇಶ್ ಜೆ ನಾಯಕ್ ಅವರ ಗಜಲ್ ಗಳ ಸಂಕಲನ ‘ಆತ್ಮ ಧ್ಯಾನದ ಬುತ್ತಿ’. ನಾಗೇಶ್ ಅವರು ಕನ್ನಡ ಸಾಹಿತ್ಯದಲ್ಲಿ ಈಗಾಗಲೇಕವಿಯಾಗಿ, ಕತೆಗಾರರಾಗಿ, ಪ್ರಬಂಧಕಾರರಾಗಿ, ಅಂಕಣಕಾರರಾಗಿ,ವಿಮರ್ಶಕರಾಗಿ,ಹನಿಕವಿಯಾಗಿ,ಪ್ರೇಮಕವಿಯಾಗಿ ಪ್ರಸಿದ್ಧರು. ಗಝಲ್ ನಲ್ಲಿ ಇದು ಅವರ ಎರಡನೇ ಕೃತಿ. ಸದಾ ಕಾಲಕ್ಕೂ ಲೋಪ ದೋಷ ,ಒಳ್ಳೆಯ ಕೆಟ್ಟ ವಿಚಾರ, ವ್ಯಕ್ತಿ ಗಳು ಸಾಮಾಜಿಕ ಪ್ರಪಂಚದಲ್ಲಿ ಸರ್ವೇಸಾಮಾನ್ಯ. ಅವರಿಗೆ ಜೀವನದಾದರ್ಶಗಳ ಕಡೆ ಮನ ಮಾಡುವ ಜವಾಬ್ದಾರಿ ಕವಿಗಳ ಮೇಲಿದೆ. ಆ ಕೆಲಸ ಈ ಕೃತಿಯ ಮೂಲಕ ನಾಗೇಶ್ ಮಾಡಿದ್ದಾರೆ. ಶ್ರೀ ಡಾ.ಎಚ್ ಎಸ್ ಸತ್ಯ ನಾರಾಯಣ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ.

About the Author

ನಾಗೇಶ್ ಜೆ. ನಾಯಕ
(23 February 1975)

ನಾಗೇಶ್ ಜೆ. ನಾಯಕ ವೃತ್ತಿಯಲ್ಲಿ ಶಿಕ್ಷಕರು. 1975 ಫೆಬ್ರವರಿ 23 ರಂದು ಸವದತ್ತಿಯಲ್ಲಿ ಜನಿಸಿದರು. ಕನ್ನಡ ದಿನಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನೀನೊಂದು ಮುಗಿಯದ ಸಂಭ್ರಮ, ಪ್ರೀತಿಯಿಂದ ಪ್ರೀತಿಗೆ, ಭರವಸೆಗಳ ಬೆನ್ನೇರಿ, ಪುಟ್ಟ ಪದ್ಯಗಳು, ಕವಿ ಸಮಯ  ಮಠದೊಳಗಣ ಬೆಕ್ಕು’ ಮುಂತಾದ ಕೃತಿಗಳು ಪ್ರಕಟಣೆಗೊಂಡಿವೆ. ಬಯಲ ಕನ್ನಡಿ-ವಿಮರ್ಶಾ ಸಂಕಲನ, ಒಡಲ ದನಿ-ಅಂಕಣ ಬರಹಗಳು, ಘನದ ಕುರುಹು-ವ್ಯಕ್ತಿ ಚಿತ್ರಣ, ಚಿನ್ನದ ಚೂರಿ-ಕಥಾ ಸಂಕಲನ ಅವರ ಇತ್ತಿಚಿನ ಕೃತಿಗಳಾಗಿವೆ. ಇವರ ಸಾಹಿತ್ಯ ರಚನೆಗಾಗಿ ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಸಂಚಯ ಕಾವ್ಯ ಪುರಸ್ಕಾರ, ಆಜೂರು ಪುಸ್ತಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ...

READ MORE

Related Books