ಆಯ್ದ ವಿಮರ್ಶಾ ಲೇಖನಗಳು

Author : ರಾಜೇಂದ್ರ ಚೆನ್ನಿ

Pages 573

₹ 120.00




Year of Publication: 2011
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ವಿವಿಧ ಸಂದರ್ಭಗಳಲ್ಲಿ ರಾಜೇಂದ್ರ ಚೆನ್ನಿ ಅವರು ಬರೆದ ವಿಮರ್ಶಾ ಲೇಖನಗಳ ಸಂಕಲನ -ಆಯ್ದ ವಿಮರ್ಶಾ ಲೇಖನಗಳು. ವಡ್ಡಾರಾಧನೆ: ಆಧುನಿಕ ಓದು, ಜನ್ನನ ಕೃತಿಗಳಲ್ಲಿ ಕಾಮ, ಪ್ರೇಮ ಮತ್ತು ದಾಂಪತ್ಯ, ವಚನ ಚಳವಳಿ ಮತ್ತು ಬಸವಣ್ಣ, ಮಹಾದೇವಿಯಕ್ಕ ಮತ್ತು ವಚನ ಸಂಪ್ರದಾಯ, ಮಾಸ್ತಿಯವರ ಸಣ್ಣಕತೆಗಳು, ಬೇಂದ್ರೆ ಕಾವ್ಯ: ಸಂಪ್ರದಾಯ ಮತ್ತು ಸ್ವಂತಿಕೆ, ಶಕ್ತಿಯ ಕವಿ ಬೇಂದ್ರೆ, ಕರುಳ ಬಳ್ಳಿಯ ಸೊಲ್ಲು, ಕುವೆಂಪು ಮತ್ತು ಕನ್ನಡ ಕಾದಂಬರಿ, ನೆನಪಿನ ದೋಣಿಯಲ್ಲಿ ಕುವೆಂಪು ಕೆಲವು ಪ್ರಶ್ನೆಗಳು, ಕುವೆಂಪು ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ, ಶಿವರಾಮ ಕಾರಂತರು ಹಾಗೂ ಆಧುನಿಕ ಭಾರತೀಯ, ಕನ್ನಡ ವಿಮರ್ಶೆ ಹಾಗೂ ಅಡಿಗರ ಸಂಸ್ಕೃತಿ ವಿಮರ್ಶೆ, ಕಂಬಾರರ ನಾಟಕಗಳು, ಕಂಬಾರರ ಕಾವ್ಯ, ಲಂಕೇಶರ ‘ಮುಸ್ಸಂಜೆಯ ಕಥಾ ಪ್ರಸಂಗ, ತೇಜಸ್ವಿಯವರ ‘ಚಿದಂಬರ ರಹಸ್ಯ’, ಕುಸುಮಬಾಲೆ: ನಿರಚನವಾದಿ ಓದು, ಚರಿತ್ರೆ ಮತ್ತು ಕಾವ್ಯ: ಶಿವಪ್ರಕಾಶರ ಕೆಲವು ಪದ್ಯಗಳು, ಮೊಗಳ್ಳಿ ಅವರ ‘ಭೂಮಿ’ ಮುಂತಾದ ವಿಮರ್ಶಾ ಲೇಖನಗಳನ್ನು ಈ ಕೃತಿ ಒಳಗೊಂಡಿದೆ. 

About the Author

ರಾಜೇಂದ್ರ ಚೆನ್ನಿ
(21 October 1955)

ರಾಜೇಂದ್ರ ಚೆನ್ನಿ ಅವರು ಕುವೆಂಪು ವಿ.ವಿ. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ನಿವೃತ್ತ ಪ್ರಾಧ್ಯಾಪಕರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದವರು. 1955ರ ಅಕ್ಟೋಬರ್ 21ರಂದು ಜನನ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಮೈಸೂರು ವಿ.ವಿ.ಯಿಂದ ಪಿಎಚ್.ಡಿ ಪಡೆದರು. ಸಂಡೂರು, ಬೆಳಗಾವಿ ಸೇರಿದಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೀಗೆ ವಿವಿಧೆಡೆ ಬೋಧನೆಯ ಸೇವೆ ಸಲ್ಲಿಸಿ, 1981ರಿಂದ 1991ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ, ಕುವೆಂಪು ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ವಿಮರ್ಶೆ, ಲೇಖನ ಹಾಗೂ ಕತೆಗಳನ್ನು ಬರೆಯುತ್ತಲೇ ಜನಪರ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. 2009ನೇ ಸಾಲಿನ ಪ್ರತಿಷ್ಠಿತ ಜಿ.ಎಸ್.ಎಸ್. ಪ್ರಶಸ್ತಿ ಪಡೆದಿದ್ದಾರೆ. ಇವರ ಮೊದಲ ...

READ MORE

Related Books