ಆಜಾದಿ ಕನ್ಹಯ್ಯ, ದಲಿತ ದನಿ ಜಿಗ್ನೇಶ್

Author : ಎನ್.ಎಸ್. ಶಂಕರ್‌

Pages 48

₹ 50.00




Year of Publication: 2020
Published by: ಬಹುರೂಪಿ
Address: ಎಂಬೆಸಿ ಸೆಂಟರ್, 111, ಫಸ್ಟ್ ಪ್ಲೋರ್, ಕ್ರೆಸೆಂಟ್ ರೋಡ್. ಕುಮಾರಪಾರ್ಕ್ ಈಸ್ಟ್, ಬೆಂಗಳೂರು- 560001
Phone: 7019182729

Synopsys

‘ಆಜಾದಿ ಕನ್ಹಯ್ಯ, ದಲಿತ ದನಿ ಜಿಗ್ನೇಶ್’ ಸಂದರ್ಶನಗಳ ಸಂಕಲನ. ಸಾಮಾಜಿಕ ವಿಶ್ಲೇಷಕ, ಹಿರಿಯ ಪತ್ರಕರ್ತ ಎನ್.ಎಸ್.ಶಂಕರ್ ಸಂದರ್ಶಿಸಿದ್ದಾರೆ.

ಸಾಮಾಜಿಕ ಹೋರಾಟಗಾರರಿಗೆ ಇದು ಹೇಗೆ ಅಗತ್ಯವೋ ಅಂತೆಯೇ ಗಿಣಿ ಮಾತಿನ ಮಾಧ್ಯಮಗಳಿಗೂ ಈ ಸಂದರ್ಶನಗಳು ಕಲಿಕೆಯ ಪಠ್ಯ. ದೇಶ ಇಂದು ಫೈಜ್ ಅಹಮದ್ ಫೈಜ್ ರ ಕವಿತೆಯ ಸಾಲುಗಳನ್ನು ಹಿಡಿದು ನಿಂತಿದೆ. ಕನ್ಹಯ್ಯನ ಆಜಾದಿ ಘೋಷಣೆ ದೇಶದ ಎಲ್ಲೆಡೆ ಮರುಧ್ವನಿಸುತ್ತಿದೆ. ಇಂತಹ ಸಂದರ್ಭದಲ್ಲಿ ಎನ್.ಎಸ್.ಶಂಕರ್ ಅವರ ಈ ಕೃತಿ ವಿಚಾರದ ಬೆಳಕು ಹರಡುವುದು ಖಂಡಿತ ಎನ್ನುತ್ತಾರೆ ಪತ್ರಕರ್ತ, ಲೇಖಕ ಜಿ.ಎನ್.ಮೋಹನ್

About the Author

ಎನ್.ಎಸ್. ಶಂಕರ್‌

ಲೇಖಕ, ಪತ್ರಕರ್ತ ಎನ್. ಎಸ್‌. ಶಂಕರ ಅವರು ‘ಸುದ್ದಿ ಸಂಗಾತಿ’ ಮತ್ತು ‘ಮುಂಗಾರು’ ಪತ್ರಿಕೆಯ ಸ್ಥಾಪಕರು. ಪ್ರಜಾವಾಣಿ, ಲಂಕೇಶ್‌ ಪತ್ರಿಕೆಯ ವರದಿಗಾರರಾಗಿಯೂ ಅನುಭವವಿದೆ. ಲಂಕೇಶರ ‘ಮುಟ್ಟಿಸಿಕೊಂಡವರು’ ಕತೆಯನ್ನು ಕಿರು ಚಿತ್ರವನ್ನಾಗಿಸಿ ದೃಶ್ಯಮಾಧ್ಯಮಕ್ಕೂ ಹೆಜ್ಜೆ ಇಟ್ಟವರು. ಅವರ ‘ಮಾನಸೋಲ್ಲಾಸ’ ಕಿರು ಚಿತ್ರ ಅಂತಾರಾಷ್ಟ್ರೀಯವಾಗಿ ಸದ್ದು ಮಾಡಿದೆ. ‘ಅರಸು ಯುಗ, ಚಂಚಲೆ’ ಅವರ ಕೃತಿಗಳು. ಸಮಕಾಲೀನ ಘಟನಾವಳಿಗಳು ಕುರಿತಂತೆ ಬರೆದ ಬರೆಹ ‘ಉಸಾಬರಿ’ ಅವರ ಇತ್ತಿಚಿನ ಕೃತಿ. ...

READ MORE

Related Books