
‘ಅಧಿಕಾರ ಮೀಮಾಂಸೆ’ ಕೃತಿಯು ಪಿ.ವಿ ನಾರಾಯಣ ಅವರ ಅನುವಾದಿತ ಲೇಖನಗಳ ಸಂಕಲನ. ಕೃತಿಯ ಮೂಲ ಲೇಖಕ ಬಟ್ರಂಡ್ ರಸೆಲ್. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಅಧಿಕಾರ ಹಾಗೂ ಅಧಿಕಾರಕ್ಕೆ ಸಂಬಂಧಿಸಿದ ಸ್ಪರ್ಧೆ, ರಾಜಕಾರಣ, ಸರ್ಕಾರ, ಹಣಕಾಸು ವಿಚಾರಗಳು, ನೈತಿಕತೆ ಸೇರಿದಂತೆ ಹಲವು ಸಂಗತಿಗಳನ್ನು ರಸೆಲ್ ತಮ್ಮ ಕೃತಿಯಲ್ಲಿ ಚಿಂತಿಸಿದ್ದಾರೆ. ಈ ಕೃತಿ ಅಧಿಕಾರದ ಬಗೆಗಿನ ಓದುಗರ ಪೂರ್ವನಿರ್ಧಾರಿತ ಪರಿಕಲ್ಪನೆಗಳನ್ನು ಬುಡಮೇಲು ಮಾಡುತ್ತದಲ್ಲದೆ, ಅನೇಕ ಸಂಗತಿಗಳೊಂದಿಗೆ ತಳುಕು ಹಾಕಿಕೊಂಡ ಅಧಿಕಾರದ ವಿರಾಟ್ ಸ್ವರೂಪ ಸಹೃದಯರನ್ನು ಬೆಚ್ಚಿಬೀಳಿಸುತ್ತದೆ. ಕಾಲದೇಶಗಳ ಚೌಕಟ್ಟನ್ನು ಮೀರಿ ಸಾರ್ವತ್ರಿಕ ಗುಣ ಹೊಂದಿರುವುದು ರಸೆಲ್ ಚಿಂತನೆಗಳ ಬಹುಮುಖ್ಯ ಗುಣ. ರಸೆಲ್ಲರ ಚಿಂತನಾಕ್ರಮವನ್ನು ಅರಿಯುವ ಹಾಗೂ ಆತನ ವ್ಯಾಪಕ ಅಧ್ಯಯನದ ಆಳ ಅಗಲಗಳನ್ನು ಸೂಚಿಸುವ ಕೃತಿಯಂತೆಯೂ ಮುಖ್ಯವೆನ್ನಿಸುವ `ಅಧಿಕಾರ ಮೀಮಾಂಸೆ‘ ಕನ್ನಡದ ಮೂಲಕವೇ ಜಗತ್ತನ್ನು ಒಳಗೊಳ್ಳುವ ಓದುಗರಿಗೆ ಅತಿ ಉಪಯುಕ್ತ ಎನ್ನಿಸುವ ಪುಸ್ತಕ. ರಸೆಲ್ ಚಿಂತನೆಗಳು ಪ್ರತಿ ಓದಿಗೂ ಬೇರೆಬೇರೆ ಅರ್ಥಗಳನ್ನು ಬಿಟ್ಟುಕೊಡುವ ಶಕ್ತಿ ಹೊಂದಿವೆ. ಇಂತಹ ಸಂಕೀರ್ಣ ಸಂಗತಿಗಳನ್ನು ಪಿ.ವಿ.ಎನ್. ಅವರು ಸರಳವಾಗಿ ಹಾಗೂ ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ. ಹಲವು ವೇಳೆ ಬ್ರಿಟಿಷ್ ತತ್ವಜ್ಞಾನಿ ರಸೆಲ್ ಕನ್ನಡದವನೋ ಅಥವಾ ಭಾರತೀಯನೋ ಅನ್ನಿಸಲಿಕ್ಕೆ ಅನುವಾದದಲ್ಲಿನ ಕಸುವೇ ಕಾರಣ ಎಂದಿದೆ.
©2025 Book Brahma Private Limited.