ಅಡುಗೆ ನಡುವೆ ಬಿಡುವು

Author : ಕಾವ್ಯಶ್ರೀ ಮಹಾಗಾಂವಕರ

Pages 168

₹ 135.00




Year of Publication: 2020
Published by: ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ 
Address: ಮುಖ್ಯ ರಸ್ತೆ,ಸರಸ್ವತಿ ಗೋದಾಮು,  ಸೂಪರ್ ಮಾರ್ಕೆಟ್, ಕಲಬುರಗಿ

Synopsys

ಲೇಖಕಿ ಕಾವ್ಯಶ್ರಿ ಮಹಾಗಾಂವಕರ್ ಅವರ ವಿಮರ್ಶಾ ಲೇಖನಗಳನ್ನು ಒಳಗೊಂಡಿರುವ ಕೃತಿ-ಅಡುಗೆ ನಡುವೆ ಬಿಡುವು. ಒಟ್ಟು 18 ಪುಸ್ತಕಗಳ ವಿಮರ್ಶೆ, ಸ್ತ್ರೀ ಚಿಂತನೆಯ 6 ಲೇಖನಗಳು, ವ್ಯಾಕರಣ, ಛಂದಸ್ಸು, ಸಾಹಿತ್ಯಕ ಪರಂಪರೆ ಹೀಗೆ ಕನ್ನಡ ಪರ ಚಿಂತನೆಯ ಬರಹಗಳು,  ಬೀದರ ಜಿಲ್ಲೆಯ ಕೆಲ ಸಾಹಿತಿಗಳ ಚಿತ್ರಣಗಳಿರುವ ಲೇಖನಗಳೂ ಇವೆ. 

ಸಾಹಿತಿ ಡಾ. ಶ್ರೀಶೈಲ ನಾಗರಾಳ ಅವರು ಕೃತಿಗೆ ಬೆನ್ನುಡಿ ಬರೆದು ‘ ಪ್ರಜ್ಞೆ ಮತ್ತು ಸೂಕ್ಷ್ಮ ಸಂವೇದನೆಗೆ ಇಲ್ಲಿಯ ಲೇಖನಗಳು ದ್ಯೋತಕವಾಗಿವೆ. ಕವಿತೆ, ಕಾದಂಬರಿ, ಕನ್ನಡಪರ ಚಿಂತನಾತ್ಮಕ ಬರಹಗಳು, ಸಿನಿಮಾ ಮಾಧ್ಯಮ, ವ್ಯಕ್ತಿಚಿತ್ರಗಳು ಅವಲೋಕನ ಮಾಡಿದ್ದು, ಅವರ ಭಾಷಾ ಬಳಕೆಯಲ್ಲಿ ತೋರುವ ಸೂಕ್ಷ್ಮತೆ ಇಷ್ಟವಾಗುತ್ತದೆ. ಚಿಂತನೆಯ ಹೆಜ್ಜೆ ಗುರುತುಗಳಿಂದ ಗಮನ ಸೆಳೆಯುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

 

About the Author

ಕಾವ್ಯಶ್ರೀ ಮಹಾಗಾಂವಕರ
(11 April 1969)

ಲೇಖಕಿ, ಕಾವ್ಯಶ್ರೀ ಮಹಾಗಾಂವಕರ‌ ಮೂಲತಃ ಬೀದರನವರು. ‘ಸಿಕಾ’ ಎಂಬುದು ಇವರ ಕಾವ್ಯನಾಮ. ತಂದೆ  ಬಿ.ಜಿ.ಸಿದ್ದಬಟ್ಟೆ, ತಾಯಿ ಯಶೋದಮ್ಮ ಸಿದ್ದಬಟ್ಟೆ. ಸದ್ಯ ಕಲಬುರಗಿಯಲ್ಲಿ ವಾಸವಾಗಿದ್ದಾರೆ.  ಮೈಸೂರಿನ ನಿರ್ಮಲ ಕಾನ್ವೆಂಟ್ ನಲ್ಲಿ ಪ್ರಾಥಮಿಕ ಶಿಕ್ಷಣ, ಬೀದರಿನ ನಾರ್ಮ ಫೆಂಡ್ರಿಕ್ ಶಾಲೆಯಲ್ಲಿ ಮಾಧ್ಯಮಿಕ ಹಾಗೂ ಪದವಿಪೂರ್ವ ಶಿಕ್ಷಣ, ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಬೀದರಿನಲ್ಲಿ ಡಿಪ್ಲೊಮ ಇನ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರೆ. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವೀಧರೆ. . ಕೃತಿಗಳು: 'ಪ್ರೇಮ ಕಾವ್ಯ' (2006) ಕಾದಂಬರಿ, 'ಬೆಳಕಿನೆಡೆಗೆ' (2008) ಕಥಾ ಸಂಕಲನ , ಪ್ರಳಯದಲ್ಲೊಂದು ಪ್ರಣತಿ' (2013) ಕಥಾ ಸಂಕಲನ, 'ಜೀವಜಗತ್ತಿಗೆ ಜೇನಹನಿ' (2015) ವಿಮರ್ಶಾ ಬರಹ , ಪಿಸುಮಾತುಗಳ ...

READ MORE

Related Books