ಅಗೇಡಿ

Author : ಕೆ.ಪಿ. ಸುರೇಶ್

Pages 236

₹ 180.00




Year of Publication: 2017
Published by: ರೂಪ ಪ್ರಕಾಶನ,
Address: 2406/2407-ಕೆ1, ಒಂದನೆಯ ಅಡ್ಡರಸ್ತೆ, ಹೊಸಬಂಡಿಕೇರಿ, ಕೆ.ಆರ್‌. ಮೊಹಲ್ಲಾ, ಮೈಸೂರು-4
Phone: 93422 74331

Synopsys

ಕೆ.ಪಿ. ಸುರೇಶ್ ಅವರ ಅಂಕಣ ಬರಹಗಳ ಸಂಕಲನ ’ಅಗೇಡಿ’ಯು ವಿಷಯ ಆಯ್ಕೆ ಮತ್ತು ಪ್ರಸ್ತುತ ಪಡಿಸುವ ವಿಧಾನಗಳಿಂದಾಗಿ ಗಮನ ಸೆಳೆಯುತ್ತದೆ. ಅಗೇಡಿಯ ಬರಹಗಳು ದಿನಪತ್ರಿಕೆಯೊಂದಕ್ಕೆ ಬರೆದ ಅಂಕಣದ ಸಂಕಲನದಲ್ಲಿ ಸಮ್ಮಿಳಿತಗೊಂಡಿವೆ. ಸಾಮಾನ್ಯ ಓದುಗನನ್ನು ಗಮನದಲ್ಲಿಟ್ಟುಕೊಂಡು ಬರೆದರೂ ಆ ಕಾರಣಕ್ಕಾಗಿ ಈ ಸಂಕಲನದ ಲೇಖನಗಳು ತೆಳುವಾಗದೇ ತಮ್ಮ ಗಾಢತೆಯನ್ನು ಉಳಿಸಿಕೊಂಡಿವೆ. ಈ ಸಂಕಲನದಲ್ಲಿ ಇರುವ ೪೫ ಲೇಖನಗಳ ಪೈಕಿ ಬಹುತೇಕ ಬರೆಹಗಳು ಕೃಷಿ ಮತ್ತು ಅದು ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಕುರಿತವುಗಳು.

ಕೃಷಿ ಇಲ್ಲಿನ ಬರೆಹಗಳ ಕೇಂದ್ರವಾಗಿದ್ದರೂ ಅವು ಕೇವಲ ಕೃಷಿಗೆ ಮಾತ್ರ ಸೀಮಿತವಾಗದೇ ಅಭಿವೃದ್ಧಿ ಚಿಂತನೆ, ಬದಲಾವಣೆ-ಬೆಳವಣಿಗೆ ಸಾಗಬೇಕಾದ ರೀತಿ, ಕಂಡುಕೊಳ್ಳಬೇಕಾದ ದಾರಿಗಳ ಕುರಿತು ನಡೆಸಿದ ಚಿಂತನೆಯ ಫಲಿತಗಳಾಗಿವೆ. ಆಧುನಿಕತೆಯ ಸವಾಲು ಎದುರಿಸುತ್ತಿರುವ ಕೃಷಿಯ ಬಿಕ್ಕಟ್ಟುಗಳನ್ನು ಕುರಿತು ಬರೆಯುವಾಗ ಲೇಖಕರು ಅದನ್ನು ಕುರಿತು ಗೋಳಿನ ಕತೆಯಾಗಿಸುವುದಿಲ್ಲ. ಕೃಷಿ ಬಗೆಗಿನ ಕಾಳಜಿಯು ಕೇವಲ ತೋರಿಕೆಯ ಸ್ವರೂಪದಲ್ಲಿ ಉಳಿಯದೇ ಅದನ್ನು ಕಾಳಜಿ-ಅಭಿಮಾನ ಹಾಗೂ ವೈಚಾರಿಕ ಸ್ಪಷ್ಟತೆಯಿಂದ ಎದಿರಾಗುತ್ತಾರೆ. ಇಲ್ಲಿನ ಬರಹಗಳು ಬಿಡಿಬೀಸಾದ ಹೇಳಿಕೆಗಳಾಗದೇ ಸೂಕ್ತ-ಸಮಂಜಸ ಅಂಕಿ-ಅಂಶಗಳನ್ನು ಒಳಗೊಂಡು ಮನವರಿಕೆ ಮಾಡುತ್ತವೆ.

ಸುಸ್ಥಿರ ಕೃಷಿ ಮತ್ತು ಸುಸ್ಥಿರ ಬದುಕುಗಳೆರಡೂ ಕೇಂದ್ರ ಕಾಳಜಿಗಳಾಗಿರುವ ಇಲ್ಲಿನ ಬರಹಗಳು ಕಾಳಜಿ- ನೀಡುವ ಒಳನೋಟಗಳಿಂದಾಗಿ ವರ್ತಮಾನದ ಹಂಗಿನೊಳಗೆ ಸಿಲುಕಿಲ್ಲ. ಕೃಷಿಯನ್ನು ತಾಂತ್ರಿಕವಾಗಿ, ಮಾರುಕಟ್ಟೆಯ ದೃಷ್ಟಿಯಿಂದ, ಸರ್ಕಾರಿ ವ್ಯವಸ್ಥೆಯ ದೃಷ್ಟಿಯಿಂದ, ರಾಜಕೀಯ ದೃಷ್ಟಿಕೋನದಿಂದ ನೋಡಿರುವ ಹಲವು ನೆಲೆಯ ಮೂಲಕ ಪ್ರವೇಶಿಸುವ ಕ್ರಮ ಇಲ್ಲಿನ ಬರಹಗಳನ್ನು ಗಟ್ಟಿಗೊಳಿಸಿದೆ. ಕವಿ-ಅನುವಾದಕ ಸುರೇಶ್ ಅವರು ತಾವೊಬ್ಬ ಅಪರೂಪದ ಚಿಂತಕ ಎಂಬುದನ್ನು ಈ ಸಂಕಲನದ ಬರಹಗಳ ಮೂಲಕ ಸಾಬೀತು ಪಡಿಸಿದ್ದಾರೆ. ಇದು ಅಪರೂಪದ ವಿಶಿಷ್ಟ ಪುಸ್ತಕ.

About the Author

ಕೆ.ಪಿ. ಸುರೇಶ್

ಕೆ.ಪಿ. ಸುರೇಶ್ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.  ಸುಸ್ಥಿರ/ಸಾವಯವ ಕೃಷಿ,  ಗಾಂಧೀ ವಿಚಾರಗಳು, ಸಾಹಿತ್ಯ- ವಿಭಿನ್ನ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುವ ಇವರು ಈಗಾಗಲೇ ಎರಡು ಕವನ ಸಂಕಲನ, ಎರಡು ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಅಭಿವೃದ್ಧಿ, ಇವುಗಳ ಬಗ್ಗೆ ಸತತ ಚಿಂತನೆ ನಡೆಸುವ ಇವರು ತೆರೆಯ ಹಿಂದೆಯೇ 'ಅನಾಮಿಕ'ರಾಗಿ ಇರಲು ಬಯಸುವವರು. ಇವರ ಸಾಹಿತ್ಯ ಕೈಂಕರ್ಯ, ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ...

READ MORE

Related Books