ಅಘೋರಿಗಳ ಲೋಕದಲ್ಲಿ

Author : ಸಂತೋಷ್ ಕುಮಾರ ಮೆಹೆಂದಳೆ

Pages 325

₹ 350.00




Year of Publication: 2019
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - 560 004
Phone: 080-26617100/26617755

Synopsys

‘ಅಘೋರಿಗಳ ಲೋಕದಲ್ಲಿ’ ನಿಷಿದ್ಧ ಪ್ರಪಂಚದ ಅನುಭವ ಲೇಖಕ ಸಂತೋಷ ಕುಮಾರ ಮೆಹೆಂದಳೆ ಅವರ ಅನುಭವ ಕಥನ. ‘ಶಕ್ತಿಯ ಒತ್ತಡವಿಲ್ಲದೆ ಭೌತಿಕವಾಗಿ ಒಂದು ಸೂಜಿಯೂ ಕದಲುವುದಿಲ್ಲ ಎಂದು ವಿಜ್ಞಾನ ಸಾಧಿಸುವುದು ಹೇಗೆ ನಿಜವೋ, ಮಾನಸಿಕವಾಗಿ ದುರ್ಬಲನಾದವನನ್ನು ಮಾನಸಿಕವಾಗೇ ಕದಲಿಸಬಹುದು ಎನ್ನುವುದೂ ಅಷ್ಟೇ ನಿಜ ಎನ್ನುತ್ತದೆ ಇನ್ನೊಂದು ವಿಜ್ಞಾನ, ಇವೆರಡರ ನಡುವೆ ಸಮನ್ವಯತೆ ಸಾಧಿಸುವವನೇ ಸಾಧಕನಾದರೆ, ಅಪಕ್ವ ಮತ್ತು ಸಾಧನೆಯ ದಾರಿಯನ್ನು ಸರಿಯಾಗಿ ಗಣಿಸದೆ ವಾಮಮಾರ್ಗವನ್ನೂ, ಅಸಂಪ್ರದಾಯಸ್ಥ ಪಥವನ್ನು ಹಿಡಿದು ಹಲವು ರೀತಿಯ ಹೊಸ ವಿಧಿವಿಧಾನಗಳಿಗೆ ಪಕ್ಕಾದವನು ಅಘೋರಿ.

ಜೊತೆಗೆ ಶತಮಾನಗಳ ಕಾಲದಿಂದಲೂ ಹರಿದು ಬಂದಿರುವ ಅಘೋರ ಸಂಪ್ರದಾಯ ಸಾಧನೆಯ ಹಂತಗಳ ಸಾಕಾರಗೊಳಿಸಲು ಪ್ರಯತ್ನಿಸುತ್ತಿರುವ ರೀತಿಯಿಂದಾಗಿ ಅವರನ್ನು ವಿಭಿನ್ನ ಸಮಾಜವಾಗೇ ಗುರುತಿಸಲಾಗುತ್ತಿದೆ. ಹಾಗಾಗಿ ಅಘೋರಿ ಎನ್ನುವ ವರ್ಗದ ಸಾಧನೆ, ಸಾಧನೆ ಹೌದೇ ಅಲ್ಲವೇ ಎನ್ನುವುದು ಗಣಿಸುವವರ ಮೇಲೆ ಅವಲಂಬಿತವಾಗಿದೆಯೇ ಹೊರತಾಗಿ ಆ ಸಾಧನೆಯಿಂದ ಏನಾದರೂ ಅದ್ಭುತ, ಪವಾಡ, ಬದಲಾವಣೆ ಇತ್ಯಾದಿ ಆದೀತು, ಸಮಾಜಕ್ಕೆ ಮನುಕುಲಕ್ಕೆ ಎಂದು ನನಗೇನೂ ಅನ್ನಿಸಲಿಲ್ಲ. ವೈದ್ಯಕೀಯ ಮತ್ತು ಯೋಗ ಸಂಬಂಧಿ ಸಾಧನೆಗಳ ಹೊರತಾಗಿ,ಈ ಪುಸ್ತಕದ ಕಥಾನಕ ಆರಂಭವಾಗಿದ್ದು ನನಗೆ ಮೊದಲ ಬಾರಿಗೆ ಅಘೋರಿಯೊಬ್ಬನ ದರ್ಶನವಾದ ಸಮಯದಲ್ಲಿ, ಅದು ಸರಿ ಸುಮಾರು 2004 ರ ಮೇ ತಿಂಗಳು. ಅಲ್ಲಿಂದ ಆರಂಭವಾದ ಆಸಕ್ತಿ ಮತ್ತು ಆವತ್ತು ನನ್ನೊಂದಿಗೆ ಮಾತಿಗೆ ದೊರಕಿದ ಮಹನೀಯರ ಸಾಂಗತ್ಯದಿಂದ, ಅದರ ಅನುಭವದಿಂದ ಈ ಕೃತಿಯನ್ನು ರಚಿಸಿದ್ದೇನೆ’ ಎನ್ನುತ್ತಾರೆ ಲೇಖಕ ಸಂತೋಷ ಕುಮಾರ ಮೆಹೆಂದಳೆ. 

About the Author

ಸಂತೋಷ್ ಕುಮಾರ ಮೆಹೆಂದಳೆ

ಕನ್ನಡ ಪ್ರಮುಖ ಕಾದಂಬರಿಕಾರ, ಅಂಕಣಗಾರ, ಕಥೆಗಾರ, ವೈಜ್ಞಾನಿಕ ಮತ್ತು ಪರಿಸರ ಸಂಬಂಧಿ ಬರಹಗಾರರಲ್ಲಿ ಸಂತೋಷ್ ಮೆಹಂದಳೆಯವರು ಒಬ್ಬರು. ಅವರು ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಮತ್ತು ಅಷ್ಟೆ ಜವಾಬ್ದಾರಿಯುತವಾಗಿ ಪಟ್ಟಾಗಿ ಬರೆಯಬಲ್ಲ ದೈತ್ಯ ಕಸುವಿನ ಸಾಹಿತ್ಯಿಕ ಕಸುಬುದಾರರು. " ತರಂಗ, ಕರ್ಮವೀರ ಸುಧಾ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಓ ಮನಸೇ, ತುಷಾರ, ಮಯೂರ, ಕನ್ನಡ ಪ್ರಭ, ಕಸ್ತೂರಿ, ಉತ್ಥಾನ ಮತ್ತು ಪ್ರತಿ ವರ್ಷದ ...

READ MORE

Related Books