ಅಗ್ನಿಶಿಖೆ

Author : ಕಗ್ಗೆರೆ ಪ್ರಕಾಶ್

Pages 688

₹ 600.00




Year of Publication: 2018
Published by: ಮನುಚೈತ್ರ ಪ್ರಕಾಶನ
Address: # 326,5ನೇ ಕ್ರಾಸ್, 3ನೇ ಹಂತ, ಭುವನೇಶ್ವರಿ ನಗರ, ಬೆಂಗಳೂರು 560085

Synopsys

ಕವಿ. ಚಿಂತಕ ಎಂ.ಎನ್. ವ್ಯಾಸರಾವ್ ಅವರ ಸಮಗ್ರ ಕಾವ್ಯವನ್ನು ಸಂಪಾದಿಸಿದ ಕೃತಿ-ಅಗ್ನಿಶಿಖೆ. ಲೇಖಕರಾದ ಕಗ್ಗೆರೆ ಪ್ರಕಾಶ ಹಾಗೂ ಶ್ರೀಧರ ಬನವಾಸಿ ಅವರು ಸಂಪಾದಕರು. ಕವಿ ಎಂ.ಎನ್. ವ್ಯಾಸರಾವ್ ಅವರು ಮೂಲತಃ ಕವಿಗಳು. ಸಾಮಾಜಿಕ ಹೊಣೆಗಾರಿಕೆಯ ಮಹತ್ವವನ್ನು ಕವಿತೆಗಳ ಮೂಲಕ ಸಂದೇಶವನ್ನು ನೀಡಿದವರು. ಕನ್ನಡ ಚಲನಚಿತ್ರ ನಿದೇರ್ಶಕ ಪುಟ್ಟಣ್ಣ ಕಣಗಾಲ್ ಅವರ ಸಿನಿಮಾಗಳಿಗೆ ಗೀತೆಗಳನ್ನು ಬರೆದು ಪ್ರಸಿದ್ಧರು. 15ಕ್ಕೂ ಹೆಚ್ಚು ಗೀತೆಗಳ ಧ್ವನಿಸುರುಳಿಗಳನ್ನು ಹೊರ ತಂದಿದ್ದಾರೆ. ಇವರ ಹಲವಾರು ಕವಿತೆಗಳು ಇಂಗ್ಲಿಷ್ ಸೇರಿದಂತೆ ಇತರೆ ಭಾಷೆಗಳಿಗೂ ಅನುವಾದಗೊಂಡಿವೆ. ಎಂ.ಎನ್. ವ್ಯಾಸರಾವ್ ಅವರ ಎಲ್ಲ ಕಾವ್ಯಗಳನ್ನು ಸಂಪಾದಿಸುವ ಮೂಲಕ ಅವರಲ್ಲಿಯ ಕವಿತ್ವವನ್ನು ಓದುಗರಿಗೆ ಪರಿಚಯಿಸಲಾಗಿದೆ.

About the Author

ಕಗ್ಗೆರೆ ಪ್ರಕಾಶ್
(01 June 1971)

ಕಗ್ಗೆರೆ ಪ್ರಕಾಶ್ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಗ್ಗೆರೆ ಗ್ರಾಮದವರು. 1971 ಜೂನ್ 1 ರಂದು ಜನನ. ತಂದೆ ಕೆ.ಸಿ.ಚೆನ್ನಾಚಾರ್, ತಾಯಿ ಅಮ್ಮಯಮ್ಮ. ತಮ್ಮ ಹೆಸರಿನ ಮುಂದೆ ಹುಟ್ಟೂರನ್ನು ಸೇರಿಸಿಕೊಂಡು ಕನ್ನಡ ಸಾರಸ್ವತ ಲೋಕದಲ್ಲಿ ‘ಕಗ್ಗೆರೆ ಪ್ರಕಾಶ್’ ಎಂದೇ ಚಿರಪರಿಚಿತರು. ಬಂಡಾಯ ಸಾಹಿತ್ಯ ಸಂಘಟನೆ ಮೂಲಕ ಗುರುತಿಸಿಕೊಂಡವರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. 1994 ರಿಂದ ಹೊಸ ದಿಗಂತ, ಆಂದೋಲನ, ಪ್ರಜಾಮತ, ಕರ್ನಾಟಕ ನ್ಯೂಸ್ ನೆಟ್, ವಿಕ್ರಾಂತ ಕರ್ನಾಟಕ, ಹಾಯ್ ಬೆಂಗಳೂರು, ಚಿತ್ತಾರ, ಕರ್ನಾಟಕ ಟೀವಿ ಲೋಕ, ಕನ್ನಡಪ್ರಭ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ದುಡಿದವರು. ಇವರ ಕಾವ್ಯ-ಕಥೆ, ಚಿಂತನೆಗಳು ಆಕಾಶವಾಣಿ, ಕಿರುತೆರೆಗಳಲ್ಲೂ ಬಿತ್ತರಗೊಂಡಿವೆ. ಬೆಂಗಳೂರಿನಲ್ಲಿ ...

READ MORE

Related Books