ಆಹಾರ ಉದ್ಯಮದಲ್ಲಿ ಗೆಲ್ಲುವುದು ಹೇಗೆ?

Author : ಜೋಗಿ (ಗಿರೀಶ್ ರಾವ್ ಹತ್ವಾರ್)

Pages 112

₹ 120.00




Year of Publication: 2018
Published by: ಸಾವಣ್ಣ ಎಂಟರ್ ಪ್ರೈಸಸ್
Address: ಸಾವಣ್ಣ ಎಂಟರ್ ಪ್ರೈಸಸ್ #57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ ಬೆಂಗಳೂರು-560004
Phone: 9845224979

Synopsys

ನಮ್ಮೂರ ಹೋಟೆಲ್, ಕೆನ್- ಓ- ಲಾ, ಗುಡ್‌ ಬ್ರೆಡ್ ಯಾರಿಗೆ ಗೊತ್ತಿಲ್ಲ? ರುಚಿ ರುಚಿ ತಿನಿಸು, ಸವಿ ಸವಿ ಪಾನೀಯಗಳಿಂದಾಗಿ ಬಾಯಿಯಲ್ಲಿ ನೀರೂರಿಸುವ ಇವು ಆ ರುಚಿಯ ಕಾರಣಕ್ಕೇ ಜನರ ನಾಲಗೆ ಮೇಲೆ ಶಾಶ್ವತವಾಗಿ ನೆಲೆಸಿವೆ. ಈ ಹೊಟೆಲುಗಳ ಮಾಲೀಕರು ಗೋಪಾಡಿ ಶ್ರೀನಿವಾಸ ರಾವ್. 

ಅನೇಕ ಯುವ ವಿದ್ಯಾವಂತರನ್ನು ಹೋಟೆಲ್‌ ಉದ್ಯಮಕ್ಕೆ ಪರಿಚಯಿಸಿ ಅವರ ಕೈಕೆಳಗೆ ನೂರಾರು ಉದ್ಯೋಗಿಗಳು ಅನ್ನ ಕಂಡುಕೊಳ್ಳುವಂತೆ ಮಾಡಿದವರು ಶ್ರೀನಿವಾಸ ರಾವ್. ತಾವಷ್ಟೇ ಬೆಳೆಯದೇ ಇತರರನ್ನೂ ಬೆಳೆಸಿದ ಕೀರ್ತಿ ಕರ್ನಾಟಕ ಕರಾವಳಿಯ ಈ ಸಾಹಸಿಗೆ ಸಲ್ಲುತ್ತದೆ. ಅವರು ತಮ್ಮ ಅನುಭವದ ನೆಲೆಯಲ್ಲಿ ’ಆಹಾರ ಉದ್ಯಮದಲ್ಲಿ ಗೆಲ್ಲುವುದು ಹೇಗೆ’ ಎಂಬುದನ್ನು ಕೃತಿಯಲ್ಲಿ ತಿಳಿಸಿದ್ದಾರೆ. ಅವರ ಅನುಭವಗಳನ್ನು ಪತ್ರಕರ್ತ ಜೋಗಿ ಅಕ್ಷರಕ್ಕಿಳಿಸಿದ್ದಾರೆ. 

About the Author

ಜೋಗಿ (ಗಿರೀಶ್ ರಾವ್ ಹತ್ವಾರ್)
(16 November 1965)

ಜೋಗಿ, ಜಾನಕಿ, ಎಚ್‌. ಗಿರೀಶ್‌ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್‌ 16ರಂದು. ಮೂಲತಃ ಸೂರತ್ಕಲ್‌ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಹಾಯ್‌ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...

READ MORE

Related Books