ಅಹಿರನ ದಂಡೆಯ ಮೇಲೆ

Author : ಆರ್.ಪಿ. ಹೆಗಡೆ

₹ 75.00




Published by: ರವೀಂದ್ರ ಪುಸ್ತಕಾಲಯ
Address: ಚಾಮರಾಜಪೇಟೆ, ಸಾಗರ- 577401
Phone: 8183228616

Synopsys

ಆಸ್ಸಾಮಿ ಲೇಖಕಿ ಡಾ. ಇಂದಿರಾ ಗೋಸ್ವಾಮಿ ಅವರ ಕಾದಂಬರಿಯ ಕನ್ನಡ ಅನುವಾದ ʻಅಹಿರನ ದಂಡೆಯ ಮೇಲೆʼ. ಆರ್. ಪಿ. ಹೆಗಡೆ ಅವರು ಕನ್ನಡಕ್ಕೆ ತಂದ ಈ ಕೃತಿಯು ಛತ್ತೀಸಗಢದಲ್ಲಿ ಹರಿಯುವ ಅಹಿರನ ನದಿಯ ಮೇಲೆ ನಿರ್ಮಾಣದ ಹಂತದಲ್ಲಿರುವ ಅಣೆಕಟ್ಟಿಗೆ ಸಂಬಂಧಿಸಿದ ವಿಚಾರಗಳನ್ನು ಕತೆಯ ರೂಪದಲ್ಲಿ ಹೇಳುತ್ತದೆ. ಇಲ್ಲಿ ಕಾರ್ಮಿಕರು ಮತ್ತು ಎಂಜಿನಿಯರುಗಳ ಮಾನವೀಯ ಮುಖದ ಹೊಳಪು ಎದ್ದು ಕಾಣುತ್ತದೆ. ನದಿಯ ಪ್ರಾಕೃತಿಕ ಸೌಂದರ್ಯವನ್ನು ಚಿತ್ರಣ ಮಾಡಿದಂತೆಯೇ, ಅದಕ್ಕಿಂತ ಹೆಚ್ಚಿನ ರೀತಿಯಲ್ಲಿ ಮಾನವಶ್ರಮದ ಸೌಂದರ್ಯವನ್ನು ಚಿತ್ರಿತಗೊಳಿಸಿದ್ಧಾರೆ.

About the Author

ಆರ್.ಪಿ. ಹೆಗಡೆ - 29 January 2019)

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪದವಿ ಕಾಲೇಜಿನಲ್ಲಿ ಸುದೀರ್ಘ - ಅವಧಿಯವರೆಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಆರ್ ಪಿ ಹೆಗಡೆ ಅವರು ಸದ್ಯ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಅನುವಾದ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಎಂಟು, ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ 25ಕ್ಕೂ ಹೆಚ್ಚು ಕೃತಿಗಳು ಮತ್ತು ಕನ್ನಡದಿಂದ ಹಿಂದಿಗೆ ಅನುವಾದಿಸಿದ ನಾಲ್ಕು ಕೃತಿಗಳು ಪ್ರಕಟಗೊಂಡಿವೆ. ಇದಲ್ಲದೆ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಅನೇಕ ಸಣ್ಣ ಕಥೆಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನುವಾದ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿರುವ ಹೆಗಡೆಯವರಿಗೆ ಶಿರಸಿಯ ಕವಿ ಕಾವ್ಯ ...

READ MORE

Related Books