ಅಕ್ಕರದ ಸುಯಿಧಾನ

Author : ಹೇಮಾ ಪಟ್ಟಣಶೆಟ್ಟಿ

Pages 268

₹ 260.00




Year of Publication: 2022
Published by: ಅನನ್ಯ ಪ್ರಕಾಶನ, ಧಾರವಾಡ
Address: ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004
Phone: 94488 61604

Synopsys

ಲೇಖಕಿ ಡಾ. ಹೇಮಾ ಪಟ್ಟಣಶೆಟ್ಟಿ ಅವರು ಬರೆದ ಸಾಹಿತ್ಯ ಲೇಖನಗಳ ಸಂಗ್ರಹ ʻ ಅಕ್ಕರದ ಸುಯಿಧಾನʼ. ಪುಸ್ತಕದ ಬೆನ್ನುಡಿಯಲ್ಲಿ ಸಾಹಿತಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು, “ ಕಾವ್ಯ, ಕತೆ, ನಾಟಕ, ವಿಮರ್ಶೆ, ಅನುವಾದ, ವ್ಯಕ್ತಿಚಿತ್ರ - ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಹೇಮಾ ಪಟ್ಟಣಶೆಟ್ಟಿ ಅವರ ಸಾಧನೆಯಿದೆ. ಸಹಜ ಪ್ರತಿಭೆ ಹಾಗೂ ವ್ಯುತ್ಪತ್ತಿ ಅವರ ಬರವಣಿಗೆಯಲ್ಲಿ ಹದವಾಗಿ ಬೆರೆತಿವೆ. ಪರಂಪರೆಯ ಅರಿವಿನಲ್ಲಿಯೇ ವರ್ತಮಾನವನ್ನು ಗ್ರಹಿಸುವ ಅವರ ಬಗೆ ಬರವಣಿಗೆಗೆ ಗಟ್ಟಿತನವನ್ನು ತಂದುಕೊಟ್ಟಿದೆ. 'ಅಕ್ಕರದ ಸುಯಿಧಾನ'ದ ಬರಹಗಳಲ್ಲೂ ನಾವಿದನ್ನು ಗುರುತಿಸಬಹುದು. ಸುಯಿಧಾನ ಅಕ್ಕನಿಂದ ಆರಿಸಿಕೊಂಡದ್ದು; ಜಾಗೃತಿ, ಎಚ್ಚರ ಎಂಬರ್ಥವಿದೆ. ಅಕ್ಕರದ ಸುಯಿಧಾನ ಅರಿವಿನ ಹಾದಿಯಲ್ಲಿ ನಮ್ಮನ್ನು ಕರೆದೊಯ್ಯುವ ಬರಹಗಳು. ಹೇಮಾ ಅವರ ಇಲ್ಲಿನ ಬರವಣಿಗೆಯ ಹಿಂದೆ ಆಳವಾದ, ವಿಸ್ತಾರವಾದ ಅಧ್ಯಯನವಿದೆ. ನಿದರ್ಶನಕ್ಕಾಗಿ ಆತ್ಮಕಥೆಗಳನ್ನು ಕುರಿತ ಲೇಖನವನ್ನೇ ಗಮನಿಸಿ, ಸ್ವಲ್ಪ ವಿಸ್ತರಿಸಿದರೆ ಅದೇ ಒಂದು ಸ್ವತಂತ್ರ ಕೃತಿಯಾಗಬಹುದಾದಷ್ಟು ಮಾಹಿತಿಗಳು ಅಲ್ಲಿವೆ. ಇಲ್ಲಿನ ಅನೇಕ ಲೇಖನಗಳಿಗೆ ಹೀಗೆ ಹಿಗ್ಗುವ ಗುಣವಿದೆ. ಹೀಗಾಗಿಯೇ ಅಕ್ಕರದ ಸುಯಿಧಾನಕ್ಕೆ ಆಕರ ಗ್ರಂಥದ ಆಕೃತಿಯಿದೆ. ನಮ್ಮ ಸಂಗ್ರಹದಲ್ಲಿರಬೇಕಾದ ಕೃತಿಯಿದು. ಇಲ್ಲಿನ ಬಹಳಷ್ಟು ಲೇಖನಗಳಲ್ಲಿ ಸ್ತ್ರೀ ಜಗತ್ತಿನ ಅನಾವರಣವಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೀಗೆ ಸ್ತ್ರೀಲೋಕವನ್ನು ಅನಾವರಣಗೊಳಿಸುವ ಕ್ರಮದಲ್ಲಿಯೇ ಅಕ್ಕರ ಸುಯಿಧಾನದ ಆಶಯದ ಸಾರ್ಥಕತೆಯಿದೆ. ಅಬ್ಬರ, ಆಕ್ರೋಶಗಳಿಲ್ಲದೆ ವಿಚಾರ ಮಂಡನೆಯ ಮೂಲಕವೇ ಬದಲಾವಣೆಯ, ಬದಲಾಗಬೇಕಾದ ಅರಿವನ್ನು, ಜಾಗೃತಿಯನ್ನು ಮೂಡಿಸುವ ರಚನಾತ್ಮಕ ಹಾದಿಯಲ್ಲಿ ಇಲ್ಲಿನ ಬರಹಗಳಿವೆ” ಎಂದು ಹೇಳಿದ್ದಾರೆ. ಒಟ್ಟು 18 ಲೇಖನಗಳಿವೆ.

About the Author

ಹೇಮಾ ಪಟ್ಟಣಶೆಟ್ಟಿ
(10 February 1954)

  ಕವಯತ್ರಿ, ಬರಹಗಾರ್ತಿ ಹೇಮಾ ಪಟ್ಟಣಶೆಟ್ಟಿ ಅವರು ಮನೋವಿಜ್ಞಾನ ಹಾಗೂ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ವಿರಹೋತ್ಸವ, ಹೊಸಹಾಡು, ಕಣ್ಣುಗಳಲಿ ಕನಸು ತುಂಬಿ, ಮುಸುಕಿದೀ ಮಬ್ಬಿನಲಿ, ಬಗಾಟ ಬಗರಿ, ತುಂಟ ಮಕ್ಕಳ ತಂಟೆ, ಹೆಣ್ಣು. ವಿಮರ್ಶೆ/ವಿಚಾರ ಸಾಹಿತ್ಯ : ಮರ್ಯಾದೆಯ ಮುಸುಕಿನಲ್ಲಿ, ಅನುಲೇಖ ಮುಂತಾದವು. ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆಗೆ ಅಂತರರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ, ಮಲ್ಲಿಕಾ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ.  ಅನನ್ಯ ಪ್ರಕಾಶನ ಸ್ಥಾಪಿಸಿ 90ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books