ಅಂಬೇಡ್ಕರ್ ಏಕೆ ಮನುಸ್ಮೃತಿ ಸುಟ್ಟರು

Author : ವಿಕಾಸ್ ಆರ್ ಮೌರ್ಯ

Pages 40

₹ 30.00




Year of Publication: 2021
Published by: ದಲಿತ ಸಂಘರ್ಷ ಸಮಿತಿ
Address: ಚಿಕ್ಕಬಳ್ಳಾಪುರ ಜಿಲ್ಲಾ ಶಾಖೆ, ಲೇಟ್ ನಾರಾಯಣಪ್ಪ ಬಿಲ್ಡಿಂಗ್, ಕೊರಚರಪೇಟೆ, ಹಳೆ ಬಸ್ ನಿಲ್ದಾಣದ ಹತ್ತಿರ, ಚಿಕ್ಕಬಳ್ಳಾಪುರ
Phone: 9449073119

Synopsys

‘ಅಂಬೇಡ್ಕರ್ ಏಕೆ ಮನುಸ್ಮೃತಿ ಸುಟ್ಟರು’ ಲೇಖಕ ವಿಕಾಸ್ ಆರ್ ಮೌರ್ಯ ಅವರು ರಚಿಸಿರುವ ಕೃತಿ. ಡಾ.ಬಿ.ಆರ್. ಅಂಬೇಡ್ಕರ್ ತಮ್ಮ ಹೋರಾಟದ ರಥವನ್ನು ಭಾರತದ ಪರಿಸ್ಥಿತಿಗಳನ್ನು ಗಮನಿಸಿದರೆ ಆ ಹೋರಾಟದ ರಥವನ್ನು ಹಿಂದೆ ಎಳೆಯುವವರ ಕೈಗಳು ಮೇಲಾಗಿರುವಂತೆ ಕಾಣುತ್ತಿದೆ. ಮತ್ತೆ ಮನುಸ್ಮೃತಿಯು ನಮ್ಮ ದೇಶದ ಸಂವಿಧಾನದ ಮೇಲೆ ಪ್ರತಿಕ್ರಾಂತಿ ಹೂಡುತ್ತಿರುವುದು ನಿಚ್ಚಳವಾಗಿ ಗೋಚರಿಸುತ್ತಿದೆ. ಮನುಸ್ಮೃತಿ ಎತ್ತಿ ಹಿಡಿಯುವ ಮೇಲು-ಕೀಳು, ತಾರತಮ್ಯ, ಬ್ರಾಹ್ಮಣ್ಯ ಶ್ರೇಷ್ಠತೆಯನ್ನು ಆಳುವ ಸರ್ಕಾರಗಳೇ ಜನರ ಮೇಲೆ ಹೇರುತ್ತಿವೆ. ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಬಂಧುತ್ವ, ನ್ಯಾಯಗಳು ಮಸುಕಾಗುತ್ತಿವೆ. ಇಂತಹ ಸಂದರ್ಭದಲ್ಲಿ ಅಂಬೇಡ್ಕರರು ಮನುಸ್ಮೃತಿಯನ್ನು ಏಕೆ ಸುಟ್ಟರು ಎಂಬುದನ್ನು ತಿಳಿದುಕೊಳ್ಳುವ ಜರೂರು ಎಲ್ಲರಿಗೂ ಇದೆ. ಅದರಲ್ಲಿಯೂ ಬ್ರಾಹ್ಮಣ್ಯದ ಬಲೆಯಲ್ಲಿ ಸಿಕ್ಕಿ ನರಳಾಡುತ್ತಿರುವ ಶೂದ್ರರು, ದಲಿತರು ಮತ್ತು ಮಹಿಳೆಯರಿಗೆ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಈ ಕೃತಿಯನ್ನು ಹೊರತರುತ್ತಿದ್ದೇವೆ ಎಂದು ಚಿಕ್ಕಬಳ್ಳಾಪುರ ಘಟಕದ ದಲಿತ ಸಂಘರ್ಷ ಸಮಿತಿ ತಿಳಿಸಿದೆ.

About the Author

ವಿಕಾಸ್ ಆರ್ ಮೌರ್ಯ
(08 June 1981)

ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ ಮತ್ತು ಹೋರಾಟಗಾರ ವಿಕಾಸ್ ಆರ್ ಮೌರ್ಯ. ಹುಟ್ಟೂರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹೊಸಹಳ್ಳಿ. ಬೆಳೆದದ್ದು ಮಂಡ್ಯ ಜಿಲ್ಲೆಯ ಹೊಸಹೊಳಲಿನಲ್ಲಿ. ಗಣಿತ ಸ್ನಾತಕೋತ್ತರ ಪದವಿ ಮುಗಿಸಿರುವ ವಿಕಾಸ್ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಲೇಖನಗಳ ಸಂಗ್ರಹ ‘ಚಮ್ಮಟಿಕೆ’ ಕೃತಿಯನ್ನು ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಜೊತೆಗೆ ಆಫ್ರಿಕನ್ ಅಮೆರಿಕನ್ ಬರಹಗಾರ ಫೆಡರಿಕ್ ಡಾಗ್ಲಾಸ್ ನ ಆತ್ಮಕಥೆಯನ್ನು 'ಕಪ್ಪು ಕುಲುಮೆ' ಎಂಬ ಹೆಸರಿನಲ್ಲಿ ಕನ್ನಡೀಕರಿಸಿದ್ದಾರೆ. 'ಕಪ್ಪು ಕುಲುಮೆ'ಯನ್ನೂ ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ.  ಹಾಗೇ 'ನೀಲವ್ವ' ...

READ MORE

Related Books