ಅಂಬೇಡ್ಕರ್ ಪರಿಕಲ್ಪನೆ: ಹಲವು ಕಣ್ಗಳಲ್ಲಿ

Author : ವಿ. ಮುನಿವೆಂಕಟಪ್ಪ

Pages 360

₹ 270.00




Year of Publication: 2016
Published by: ವಾಚಸ್ಪತಿ ಪ್ರಕಾಶನ
Address: # 658, 2ನೇ ಮಹಡಿ, 4ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, E & F ಬ್ಲಾಕ್, 2ನೇ ಹಂತ, ರಾಮಕೃಷ್ಣನಗರ, ಮೈಸೂರು-570023

Synopsys

ಲೇಖಖ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರ ಕೃತಿ-ಅಂಬೇಡ್ಕರ್ ಪರಿಕಲ್ಪನೆ: ಹಲವು ಕಣ್ಗಳಲ್ಲಿ.. ಅಂಬೇಡ್ಕರ ಅವರ ವಿಚಾರಗಳು ಮಾನವೀಯವಾಗಿದ್ದರೂ, ಅವು ಕೇವಲ ಜಾತಿಗಷ್ಟೇ ಸೀಮಿತಗೊಳಿಸಲಾಗಿದೆ. ಈ ದುರಂತಕ್ಕೆ ನಾಡಿನ ವಿವಿಧ ಲೇಖಕರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ಅವರ ಲೇಖನಗಳನ್ನು ಸಂಗ್ರಹಿಸಿ ನೀಡಿದ್ದೇ ಈ ಕೃತಿ. ಅಂಬೇಡ್ಕರ್ ವಿಚಾರಗಳನ್ನು ಹತ್ತಿಕ್ಕುವ ಸಂಚು-ಕುತಂತ್ರಗಳು ನಡೆಯುತ್ತಿವೆ. ಈ ಎಲ್ಲದರ ಬಗ್ಗೆ ಪ್ರತಿಕ್ರಿಯಿಸಿರುವ ಲೇಖನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಅಂಬೇಡ್ಕರ್ ವಿಚಾರಗಳು ಸಮಾನತೆಯ ನವ ಸಮಾಜ ನಿರ್ಮಾಣವನ್ನು ಬಯಸುತ್ತವೆ ಎಂಬುದನ್ನು ತೋರಿಸುವುದು, ಅಪಪ್ರಚಾರದ ವಿರುದ್ಧ ತಿಳಿವಳಿಕೆ ನೀಡುವುದು ಸಹ ಈ ಕೃತಿಯ ಉದ್ದೇಶವಾಗಿದೆ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books