ಅಂಬೇಡ್ಕರ್ ವಾದ

Author : ವಿ. ಮುನಿವೆಂಕಟಪ್ಪ

Pages 208

₹ 160.00




Year of Publication: 2010
Published by: ಅರುಹು-ಕುರುಹು ಪ್ರಕಾಶನ
Address: # 366/A, A & B ಬ್ಲಾಕ್, ಕುವೆಂಪುನಗರ, ಮೈಸೂರು-570023
Phone: 08212543244

Synopsys

ಲೇಖಕ, ಚಿಂತಕ ಡಾ. ವಿ.ಮುನಿವೆಂಕಟಪ್ಪ ಅವರು ಬರೆದ ಕೃತಿ- ಅಂಬೇಡ್ಕರ್ ವಾದ. ಸಮಾನತೆ ಇರುವ ಸಮಾಜದಲ್ಲಿ ಮಾನವೀಯತೆ ಇರುತ್ತದೆ. ವ್ಯಕ್ತಿ-ವ್ಯಕ್ತಿ ಮಧ್ಯೆ ತಾರತಮ್ಯ ಇರದು. ಬಡವ-ಶ್ರೀಮಂತ, ಮೇಲು ಜಾತಿ-ಕೀಳು ಜಾತಿ ಇತ್ಯಾದಿ ತಾರತಮ್ಯ ವಿರೋಧಿಸಿ ಹತ್ತು ಹಲವು ಸಮಾಜ ಸುಧಾರಕರು ವಿಶೇಷವಾಗಿ ಬುದ್ಧ-ಬಸವ ಅಂಬೇಡ್ಕರ್ . ಫುಲೆ ದಂಪತಿ ಹೀಘೆ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ವ್ಯಕ್ತಿಗತವಾಗಿ ಬೇರೆ ಬೇರೆ ವಿಚಾರಗಳಿದ್ದರೂ ಸರ್ವರೂ ಸಮಾನರು ಎಂಬ ಮಾನವೀಯತೆಯೇ ಅವರ  ವೈಚಾರಿಕತೆಯ ಜೀವಾಳವಾಗಿದೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್‍ ವಾದವು ಸಹ ಇದಕ್ಕಿಂತ ಬೇರೆ ಇಲ್ಲ. ಸಮಾಜದಲ್ಲಿ ಶೋಷಣೆ ಇರಕೂಡದು, ಪ್ರತಿ ವ್ಯಕ್ತಿಗೂ ಗೌರವ ಇರಬೇಕು. ಶ್ರಮಕ್ಕೆ ಗೌರವ ಸಿಗಬೇಕು. ಇಂತಹ ತಿಳಿವಳಿಕೆಯ ಕನಿಷ್ಟ ಜ್ನಾನದ ಮೂಲವೇ ಅಂಬೇಡ್ಕರ್ ಅವರ ಪ್ರತಿಪಾದನೆಯಾಗಿದೆ. ಇದೇ ಅಂಬೇಡ್ಕರ್ ವಾದ ಎಂಬುದು ಲೇಖಕರ ಅಭಿಪ್ರಾಯವನ್ನು ಇಲ್ಲಿ ಕ್ರೋಢಿಕರಿಸಿದ್ದೇ ಈ ಕೃತಿ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books