ಅಂಬಿಕಾತನದತ್ತರ ಮೇಘದೂತ

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 208

₹ 180.00




Year of Publication: 2011
Published by: ಶ್ರೀಮಾತಾ ಪ್ರಕಾಶನ,
Address: ಸಾಧನಕೇರಿ, ಧಾರವಾಡ

Synopsys

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ದ.ರಾ.ಬೇಂದ್ರೆ ಅವರ ಕೃತಿ ‘ಅಂಬಿಕಾತನಯದತ್ತರ ಮೇಘದೂತ. ಕಾಳಿದಾಸ ಮೂರು ನಾಟಕಗಳ ಪೈಕಿ ಮೇಘದೂತರ ಸಹ ಒಂದು ದುಶ್ಯಂತ ಮಹಾರಾಜ ಹಾಗೂ ಶಾಕುಂತಲಾ ಅವರ ಪ್ರೇಮ ವೃತ್ತಾಂತ, ಉಂಗುರ ಕಳೆದುಕೊಂಡ ಶಾಕುಂತಲಾ ಪಡುವ ಕಷ್ಟ ನಂತರ ಉಂಗುರ ಸಿಕ್ಕ ನಂತರ ನಾಟಕದ ತಿರುವು ಸುಖಾಂತ್ಯದಲ್ಲಿ ಕೊನೆಯಾಗುವ ಕಥೆಯನ್ನು ಒಳಗೊಂಡಿದೆ. ಮೇಘಗಳ ಮೂಲಕ ತಮ್ಮ ಪ್ರೇಮವನ್ನು ದುಶ್ಯಂತನಿಗೆ ರವಾನಿಸುವ ರೋಮಾಂಚನದ ಅದ್ಭುತ ದೃಶ್ಯಗಳನ್ನು ಒಳಗೊಂಡ ನಾಟಕವಿದು. ಮೂಲ ಹಸ್ತಪ್ರತಿಗಳನ್ನು ಒಳಗೊಂಡು ವಿಮರ್ಶೆ  ಬರೆದಿದ್ದು ಈ ಕೃತಿಯ ಹೆಗ್ಗಳಿಕೆ. ಸಾಹಿತಿ ಡಾ. ವಾಮನ ಬೇಂದ್ರೆ ಅವರು ಕೃತಿಯನ್ನು ಸಂಪಾದಿಸಿದ್ದಾರೆ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books