ಅನಂತ ಚೇತನ

Author : ಟಿ.ಎಸ್. ಗೋಪಾಲ್

Pages 80

₹ 72.00




Year of Publication: 2019
Published by: ಭಾರತೀ ಪ್ರಕಾಶನ
Address: ಸರಸ್ವತಿಪುರಂ, ಮೈಸೂರು-570009
Phone: 0821254 3941

Synopsys

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಪ್ರಮುಖ ನಾಯಕ ಹಾಗೂ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದ ಅನಂತಕುಮಾರ ಅವರ ಜೀವನ ಸಾಧನೆ ಕುರಿತು ಪರಿಚಯಾತ್ಮಕವಾಗಿ ಲೇಖಕ ಟಿ.ಎಸ್. ಗೋಪಾಲ ಅವರ ಬರೆದ ಕೃತಿ. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ವಿಮಾನಯಾನ ಖಾತೆ ನಿರ್ವಹಿಸಿದ್ದರು. ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ರಾಸಾಯನಿಕ ಹಾಗೂ ಪೆಟ್ರೋಲಿಯಂ ಖಾತೆಯನ್ನು ನಿರ್ವಹಿಸುತ್ತಿದ್ದು, ಅವರು ಅಕಾಲಿಕವಾಗಿ ಕ್ಯಾನ್ಸರ್ ಗೆ ತುತ್ತಾದರು. ಇವರ ಜೀವನ ಹಾಗೂ ರಾಜಕೀಯ ಸಾಧನೆ ಕುರಿತು ಹಾಗೂ ಯೋಜನೆಗಳ ದೂರದೃಷ್ಟಿ ಕುರಿತು ಈ ಕೃತಿಯು ಪಕ್ಷಿನೋಟ ನೀಡುತ್ತದೆ.

About the Author

ಟಿ.ಎಸ್. ಗೋಪಾಲ್

ಲೇಖಕ ಟಿ. ಎಸ್. ಗೋಪಾಲ್ ಅವರ ಹೆಸರು ತಿರು ಶ್ರೀನಿವಾಸಾಚಾರ್ಯ ಗೋಪಾಲ್. ಕನ್ನಡ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನ ಕುರಿತ ಪುಸ್ತಕಗಳನ್ನು ಬರೆದಿದ್ದಾರೆ. ಅವರ 'ಕಾಡು ಕಲಿಸುವ ಪಾಠ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (2013) ದೊರೆತಿದೆ. ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಎ. ಹಾಗೂ ಎಂ. ಎ. ಪದವಿ (ಚಿನ್ನದ ಪದಕ) ಪಡೆದಿರುವ ಅವರು ದಕ್ಷಿಣ ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಅವರು ...

READ MORE

Related Books