ಆನಂದವರ್ಧನ ಕಾವ್ಯಮೀಮಾಂಸೆ ಮತ್ತು ಕನ್ನಡ ಧನ್ಯಾಲೋಕ

Author : ಕೆ.ಕೃಷ್ಣಮೂರ್ತಿ

Pages 332

₹ 150.00




Year of Publication: 1951
Published by: ಅಭಿನವ ಪ್ರಕಾಶನ
Address: ಮುಖ್ಯರಸ್ತೆ, ಮಾರೇನಹಳ್ಳಿ, 17/18-2, 1ನೇ ವಿಜಯನಗರ, ಬೆಂಗಳೂರು -560040     
Phone: 9448804905

Synopsys

ಭಾರತೀಯ ಕಾವ್ಯಮೀಮಾಂಸೆಯಲ್ಲಿ ಆನಂದವರ್ಧನ ಕಾವ್ಯ ಮೀಮಾಂಸೆಯ ತತ್ವ ,ಕನ್ನಡ ಧ್ವನ್ಯಾಲೋಕದ ಪರಿಚಯವನ್ನು ಸ್ಥೂಲವಾಗಿ ತಿಳಿಸುವ ಕೃತಿಯಾಗಿದೆ.

ಧ್ವನಿ  ಎಂದರೇನು, ಕಾವ್ಯಮೀಮಾಂಸೆಯಲ್ಲಿ ಅದರ ಸ್ಥಾನವೇನು ಮತ್ತು ಕಾವ್ಯದ ಎಲ್ಲಾ ಅಂಶಗಳಲ್ಲಿಯೂ ಕಂಡುಬರುವ ’ಧ್ವನಿ’ಯನ್ನು ಆನಂದವರ್ಧನನು ವಿವರಿಸುವುದನ್ನೂ ಈ ಕೃತಿ ತಿಳಿಸುತ್ತದೆ.  ಕಾವ್ಯ ಮೀಮಾಂಸೆಯ ತತ್ವ ವಿಕಾಸ, ಕಾವ್ಯಾಲಂಕಾರ, ಧ್ವನಿ ತತ್ವದ ವಿವರಣೆ, ಧ್ವನಿ ತತ್ವದ ಮೂಲ ಪ್ರೇರಣೆ, ರಸತತ್ವ, ವಿವಿಧ ಪ್ರಬೇಧಗಳು, ಮತ್ತು ಆನಂದವರ್ಧನ ಕಾಲದ ಪ್ರಾಕೃತ ಕಾವ್ಯಕ್ಕಿದ್ದ ಮನ್ನಣೆ, ಧ್ವನಿ ಎಂಬುದನ್ನು ಲಾಕ್ಷಣಿಕರು ಹೇಗೆ ಗ್ರಹಿಸಿದ್ದಾರೆ ಎಂಬುದನ್ನು ಆನಂದವರ್ಧನ ಈ ಕೃತಿಯಲ್ಲಿ ಪ್ರತಿಪಾದಿಸುತ್ತಾನೆ.

ಕನ್ನಡ ಧ್ವನ್ಯಾಲೋಕವನ್ನು ಪರಿಚಯಿಸುತ್ತಾ ಅವುಗಳ ಮೂಲಕಾರಿಕೆಗಳ ಮತ್ತು ಪರಿಕರ ಶ್ಲೋಕಗಳ ಆಕಾರಾದಿಯನ್ನು ಮತ್ತು ಧ್ವನ್ಯಾಲೋಕದಲ್ಲಿರುವ ಲಕ್ಷ್ಯಗಳ ಆಕಾರಾದಿಗಳನ್ನು ಈ ಕೃತಿ ತಿಳಿಸುತ್ತದೆ.

About the Author

ಕೆ.ಕೃಷ್ಣಮೂರ್ತಿ

ಕೆ.ಕೃಷ್ಣಮೂರ್ತಿ- ಹುಟ್ಟಿದ್ದು ಹಾಸನ ಜಿಲ್ಲೆ ಕೇರಳಾಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ ಮತ್ತು ಎಂ.ಎ. ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಸರ್ವಪ್ರಾವಿಣ್ಯ. ಬೊಂಬಾಯಿ ವಿಶ್ವವಿದ್ಯಾಲಯದಿಂದ ಧ್ವಾನ್ಯಾಲೋಕ ಮತ್ತು ಅದರ ವಿಮರ್ಶೆ ಡಾಕ್ಟರೇಟ್ ಪದವಿ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕೆಲಸ. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಮುಖ್ಯಪುಸ್ತಕಗಳು ಧ್ವನ್ಯಾಲೋಕ ಮತ್ತು ಆನಂದವರ್ಧನನ ಕಾವ್ಯಮೀಮಾಂಸೆ, ಮಮ್ಮಟನ ಕಾವ್ಯ ಪ್ರಕಾಶ. ರಾಜಶೇಖರನ ಕಾವ್ಯ ಮೀಮಾಂಸೆ, ದಂಡಿಯ ಕಾವ್ಯದರ್ಶನ, ವಾಮನನ ಕಾವ್ಯಲಂಕರಸೂತ್ರವೃತ್ತಿ, ಕ್ಷೇಮೇಂದ್ರನ ಕವಿಕಂಠಾಭರಣ, ಔಚಿತ್ಯಚರ್ಚೆ, ಭಾಮಹನ ಕಾವ್ಯಾಲಂಕಾರ, ಹಾಗೆಯೇ ಇಂಗ್ಲಿಷಿನಲ್ಲಿ ವಕ್ರೋಕ್ತಿಜೀವಿತ, ಧ್ವನ್ಯಾಲೋಕ, ನಾಟ್ಯಶಾಸ್ತ್ರ ಮತ್ತು ಅಭಿನವ ಭಾರತಿ, ...

READ MORE

Related Books